ಹಾಸನದಲ್ಲಿ : ಹಾಸನದಲ್ಲಿ ಜಾತಿಗಣತಿ ನಡೆಸುವ ಸಿಬ್ಬಂದಿಗಳಿಗೆ ಸಂಕಷ್ಟ ತಪ್ಪಿಲ್ಲ. ಜಾತಿ ಗಣತಿ ತೆರಳುತ್ತಿದ್ದ ಶಿಕ್ಷಕಿಯ ಮೇಲೆ ಇದೀಗ ಮತ್ತೆ ಬೀದಿ ನಾಯಿ ದಾಳಿ ಮಾಡಿದೆ. ಮೊನ್ನೆ ತಾನೇ ಏಳು ಜನರು ಹಾಗು ಓರ್ವ ಶಿಕ್ಷಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದ ಘಟನೆ ನಡೆದಿತ್ತು.
ಇದೀಗ ಸ್ಕೂಟಿಯಲ್ಲಿ ತೇರಳುತ್ತಿದ್ದ ವೇಳೆ ಶಿಕ್ಷಕಿ ಮೇಲೆ ನಾಯಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಸ್ಕೂಟಿಯಿಂದ ಕೆಳಗೆ ಬಿದ್ದ ಶಿಕ್ಷಕಿಗೆ ಎಡಗೈ ಮುರಿದು ಹೋಗಿದೆ. ಬೇಲೂರು ಹಳೇಗೆಂಡಿಹಳ್ಳಿ ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಲುಕ್ನ ಎನ್ನುವ ಶಿಕ್ಷಕಿಗೆ ಗಂಭೀರವಾದ ಗಾಯಗಳಾಗಿವೆ . ಸ್ಕೂಟಿ ನಿಲ್ಲಿಸುತ್ತಿದ್ದ ವೇಳೆ ಬೀದಿ ನಾಯಿ ದಾಳಿ ಮಾಡಿದೆ. ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.