Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING ; ಏಷ್ಯಾ ಕಪ್- 2025ರ ಸಂಪೂರ್ಣ ‘ವೇಳಾಪಟ್ಟಿ’ ಪ್ರಕಟ, ಸೆ.14ಕ್ಕೆ ದುಬೈನಲ್ಲಿ ‘ಭಾರತ vs ಪಾಕ್ ಪಂದ್ಯ’ |Asia Cup 2025

02/08/2025 10:01 PM

BREAKING : ಪಾಕ್’ನ ಕೆಲ ಪ್ರದೇಶಗಳಲ್ಲಿ 5.4 ತೀವ್ರತೆಯ ಪ್ರಭಲ ಭೂಕಂಪ ; ಆತಂಕದಲ್ಲಿ ‘ಕುರಾನ್’ ಪಠಿಸಿದ ಜನ |Earthquake

02/08/2025 9:43 PM

BREAKING : ಫುಟ್ಬಾಲ್ ದಂತಕಥೆ ‘ಲಿಯೋನೆಲ್ ಮೆಸ್ಸಿ’ ಭಾರತಕ್ಕೆ ಆಗಮನ, ಡಿ.15ರಂದು ‘ಪ್ರಧಾನಿ ಮೋದಿ’ ಭೇಟಿ

02/08/2025 9:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?
KARNATAKA

BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?

By kannadanewsnow0916/06/2025 2:52 PM

ಶಿವಮೊಗ್ಗ: ನಿನ್ನೆ ಸಾಗರದ ವಿಜಯನಗರ ಬಡಾವಣೆಯ ಈಜುಕೊಳದ ಸಮೀಪದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ರಶ್ಮಿ ಎಂಬುವರು ಸಾಗರ ಪೇಟೆ ಠಾಣೆಗೆ ತೆರಳಿ, ಸದಾನಂದ ಅವರ ಸಾವಿಗೆ ನನ್ನ ಪತಿ ಗ್ರಾಮ ಲೆಕ್ಕಿಗ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮಾತ್ ಹಾಗೂ ಪ್ರದೀಪ್ ಕಾರಣ ಎಂಬುದಾಗಿ ದೂರು ನೀಡಿದ್ದರು. 

ಈ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 103(1) ಹಾಗೂ 238, 3(5)ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎ.1 ಆರೋಪಿಯಾಗಿ ಸಾಗರದ ವಿಜಯನಗರದ ವೆಂಕಟೇಶ್ ಆಚಾರಿ, ಎ2 ಆರೋಪಿಯಾಗಿ ಸಾಗರ ಎಸ್ ಎನ್ ನಗರದ ರವೀಂದ್ರ ಕಾಮತ್ ಹಾಗೂ ಎ.3 ಆರೋಪಿಯಾಗಿ ವಿಜಯನಗರದ ಪ್ರದೀಪ್ ಎಂಬುವರ ವಿರುದ್ಧ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು, ಸದಾನಂದ ಅವರ ಹತ್ಯೆ ಪ್ರಕರಣದಲ್ಲಿ ವಿಎ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿಗಳಾದಂತ ರವೀಂದ್ರ ಕಾಮತ್ ಹಾಗೂ ಪ್ರದೀಪ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆ ಬಳಿಕ ಕಲಂ ನಂ.31ರ ಪ್ರಕಾರ ರವೀಂದ್ರ ಕಾಮತ್, ಪ್ರದೀಪ್ ಅವರಿಗೆ ನೋಟಿಸ್ ನೀಡಿ ಕಳುಹಿಸಲಾಗಿದೆ. ಅಲ್ಲದೇ ದಿನವೂ ಠಾಣೆಗೆ ಬಂದು ಸಹಿ ಮಾಡುವಂತ ಷರತ್ತು ವಿಧಿಸಲಾಗಿದೆ. ಈ ನಿಯಮ ಮೀರಿದರೇ ಅವರನ್ನು ಬಂಧಿಸಲಾಗುತ್ತದೆ. ಈ ಪ್ರಕರಣದಲ್ಲಿ ವೆಂಕಟೇಶ್ ಆಚಾರಿ ಹಾಗೂ ಮೋಹನ್ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರು ಈ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಮಾಹಿತಿ ನೀಡಿದ್ದಾರೆ.

ಸದಾನಂದ ಮರ್ಡರ್ ಕೇಸಲ್ಲಿ ಮೂವರ ವಿರುದ್ಧ ದಾಖಲಾದ ಎಫ್ಐಆರ್ ನಲ್ಲಿ ಏನಿದೆ.?

ದಿನಾಂಕ:-15/06/2025 ರಂದು 11-00 ಎಎಂ ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ವೆಂಕಟೇಶ ಆಚಾರಿ ಗ್ರಾಮ ಲೆಕ್ಕಾಧಿಕಾರಿಯನ್ನು 02 ವರ್ಷದ ಹಿಂದೆ ಮದುವೆಯಾಗಿದ್ದು, ವೆಂಕಟೇಶ ಆಚಾರಿ 02 ದಿನಗಳ ಹಿಂದೆ ಪಿರ್ಯಾದಿಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದು, ಪಿರ್ಯಾದಿ ತಾಯಿಯ ತಮ್ಮ ಸದಾನಂದ ಅವರ ಹೆಂಡತಿ ತೀರಿಕೊಂಡ ನಂತರ ಇಂಧಿರಾಗಾಂಧಿ ಕಾಲೇಜು ಹತ್ತಿರ ವಾಸವಾಗಿದ್ದು, ಪಿರ್ಯಾದಿ ಗಂಡ ಮನೆ ಬಿಟ್ಟ ನಂತರ ಸದಾನಂದ ರವರೊಂದಿಗೆ ವಾಸವಾಗಿದರು ಎಂಬುದಾಗಿ ರಶ್ಮಿ ನೀಡಿದಂತ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ: -14/06/2025 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದಿಯವರಿಗೆ ವೆಂಕಟೇಶ ಆಚಾರಿ ಪಿರ್ಯಾದಿಗೆ ಪೋನ್ ಮಾಡಿ ನನ್ನ ಸ್ನೇಹಿತರಾದ ರವೀಂದ್ರ ಕಾಮತ್ ಮತ್ತು ಪ್ರದೀಪ ಇವರ ಸಹಾಯದಿಂದ ಪಿರ್ಯಾದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಪೋನ್ ಮಾಡಿದ ಸಮಯದಲ್ಲಿ ವೆಂಕಟೇಶ ಆಚಾರಿ ಪಿರ್ಯಾದಿ ಸೋದರ ಮಾವನ ಮನೆಯಲ್ಲಿಯೇ ಇರುವುದಾಗಿ ತಿಳಿಸಿದ್ದು, ಈ ಬಗ್ಗೆ ಪಿರ್ಯಾದಿಯವರು ಅವರ ಸೋದರ ಮಾವನೊಂದಿಗೆ ಮಾತನಾಡಿ ನನ್ನ ಗಂಡ ಸರಿ ಇಲ್ಲ. ಅವರ ಸ್ನೇಹ ಬಿಟ್ಟು ಬಿಡು ಎಂದು ಅವರ ಮಾವನಿಗೆ ತಿಳಿಸಿದ್ದು, ನಂತರ ಪಿರ್ಯಾದಿರವರು ಅವರ ಗಂಡ ಮತ್ತು ಅವರ ಸ್ನೇಹಿತರಾದ ರವೀಂದ್ರ ಕಾಮತ್ ಮತ್ತು ಪ್ರದೀಪ ರವರಿಗೆ ಪೋನ್ ಮಾಡಿದಾಗ ಅವರು ಪೋನ್ ಎತ್ತಿರುವುದಿಲ್ಲ ಎಂದಿದ್ದಾರೆ.

ದಿನಾಂಕ:-15/06/2025 ರಂದು ಸುಮಾರು 7-00 ಗಂಟೆ ಸಮಯದಲ್ಲಿ ಪಿರ್ಯಾದಿರವರ ಸೋದರ ಮಾವ ಸದಾನಂದ ಅವರನ್ನು ಯಾರೋ ಕೊಲೆ ಮಾಡಿ ಹೆಣವನ್ನು ವಿಜಯನಗರ ಬಡಾವಣೆಯ ರಸ್ತೆ ಅಂಚಿನಲ್ಲಿ ಬಿಸಾಕಿ ಹೋಗಿರುತ್ತಾರೆ ಎಂಬ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ನೋಡಿದಾಗ ತನ್ನ ಮಾವನ ಹೆಣವನ್ನು ಕಂಡುಬಂದಿದೆ. ಪಿರ್ಯಾದಿ ರವರ ಸೋದರ ಮಾವನನ್ನು ಪಿರ್ಯಾದಿ ಗಂಡ ವೆಂಕಟೇಶ ಆಚಾರಿ, ಎಸ್ ಎನ್ ನಗರದ ರವೀಂದ್ರ ಕಾಮತ್ ಮತ್ತು ವಿಜಯನಗರದ ಪ್ರದೀಪ ರವರು ಕೊಲೆ ಮಾಡಿರುತ್ತಾರೆಂದು ದೂರಿನಲ್ಲಿ ಆರೋಪಿ ವೆಂಕಟೇಶ್ ಆಚಾರಿ ಪತ್ನಿ ರಶ್ಮಿ ಉಲ್ಲೇಖಿಸಿದ್ದಾರೆ.

ಈ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 103(1) ಹಾಗೂ 238, 3(5)ರಡಿಯಲ್ಲಿ ಮೂವರ ವಿರುದ್ಧ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

 

BIG NEWS : ‘KUWS’ ಅಧ್ಯಕ್ಷ ಸ್ಥಾನದಿಂದ ಶಾಸಕ ವಿನಯ್ ಕುಲಕರ್ಣಿಯನ್ನು ತೆಗೆದುಹಾಕುವಂತೆ ಸಿಎಂಗೆ ಆಗ್ರಹ

BREAKING : ಬೆಂಗಳೂರಲ್ಲಿ ರ್‍ಯಾಶ್ ಡ್ರೈವಿಂಗ್ ಪ್ರಶ್ನೆ ಮಾಡಿದ ಮಹಿಳೆಯ ಮೇಲೆ ರ‍್ಯಾಪಿಡೋ ಚಾಲಕನಿಂದ ಹಲ್ಲೆ!

Share. Facebook Twitter LinkedIn WhatsApp Email

Related Posts

ಇದು ಸಕಲ ಸೌಭಾಗ್ಯವನ್ನು ನೀಡುವ ಮಂತ್ರ: ಪಠಿಸಿ ನೋಡಿ, ಪರಿಹಾರ ಖಂಡಿತ

02/08/2025 9:30 PM3 Mins Read

ಹೋರಾಟಗಾರರ ವಿರುದ್ಧ ಸರ್ಕಾರದಿಂದ ಸೇಡಿನ ಕ್ರಮ; ಮಾಜಿ MLC ಹೆಚ್.ಎಂ.ರಮೇಶ್ ಗೌಡ ಕಿಡಿ

02/08/2025 9:26 PM1 Min Read

BREAKING: ರಾಜ್ಯದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ: ಕಾರ್ಯಪಡೆ ಘಟಕ ರಚಿಸಿ ಸರ್ಕಾರ ಅಧಿಕೃತ ಆದೇಶ

02/08/2025 6:22 PM3 Mins Read
Recent News

BREAKING ; ಏಷ್ಯಾ ಕಪ್- 2025ರ ಸಂಪೂರ್ಣ ‘ವೇಳಾಪಟ್ಟಿ’ ಪ್ರಕಟ, ಸೆ.14ಕ್ಕೆ ದುಬೈನಲ್ಲಿ ‘ಭಾರತ vs ಪಾಕ್ ಪಂದ್ಯ’ |Asia Cup 2025

02/08/2025 10:01 PM

BREAKING : ಪಾಕ್’ನ ಕೆಲ ಪ್ರದೇಶಗಳಲ್ಲಿ 5.4 ತೀವ್ರತೆಯ ಪ್ರಭಲ ಭೂಕಂಪ ; ಆತಂಕದಲ್ಲಿ ‘ಕುರಾನ್’ ಪಠಿಸಿದ ಜನ |Earthquake

02/08/2025 9:43 PM

BREAKING : ಫುಟ್ಬಾಲ್ ದಂತಕಥೆ ‘ಲಿಯೋನೆಲ್ ಮೆಸ್ಸಿ’ ಭಾರತಕ್ಕೆ ಆಗಮನ, ಡಿ.15ರಂದು ‘ಪ್ರಧಾನಿ ಮೋದಿ’ ಭೇಟಿ

02/08/2025 9:31 PM

ಇದು ಸಕಲ ಸೌಭಾಗ್ಯವನ್ನು ನೀಡುವ ಮಂತ್ರ: ಪಠಿಸಿ ನೋಡಿ, ಪರಿಹಾರ ಖಂಡಿತ

02/08/2025 9:30 PM
State News
KARNATAKA

ಇದು ಸಕಲ ಸೌಭಾಗ್ಯವನ್ನು ನೀಡುವ ಮಂತ್ರ: ಪಠಿಸಿ ನೋಡಿ, ಪರಿಹಾರ ಖಂಡಿತ

By kannadanewsnow0902/08/2025 9:30 PM KARNATAKA 3 Mins Read

ನಾವು ಎಲ್ಲಾ ಒಳ್ಳೆಯ ವಿಷಯಗಳಿಗೆ ಅಯಸ್ಕಾಂತವಾಗಬೇಕಾದರೆ, ನಾವು ನಮ್ಮ ಬದ್ಧ ಸ್ವಭಾವವನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯದನ್ನು ಆಕರ್ಷಿಸುವ ವಸ್ತು ವಶಂ ಎಂದು…

ಹೋರಾಟಗಾರರ ವಿರುದ್ಧ ಸರ್ಕಾರದಿಂದ ಸೇಡಿನ ಕ್ರಮ; ಮಾಜಿ MLC ಹೆಚ್.ಎಂ.ರಮೇಶ್ ಗೌಡ ಕಿಡಿ

02/08/2025 9:26 PM

BREAKING: ರಾಜ್ಯದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ: ಕಾರ್ಯಪಡೆ ಘಟಕ ರಚಿಸಿ ಸರ್ಕಾರ ಅಧಿಕೃತ ಆದೇಶ

02/08/2025 6:22 PM

ಮತಗಳ್ಳತನ ಆರೋಪ: ಕಾಂಗ್ರೆಸ್ ವಿರುದ್ಧ ಸಂಸದ ಡಾ.ಸಿಎನ್ ಮಂಜುನಾಥ್ ವಾಗ್ಧಾಳಿ

02/08/2025 6:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.