ತುಮಕೂರು : ಪ್ರೇಮಿಗಳ ನಡುವೆ ರೀಲ್ಸ್ ಫೋಟೋಸ್ ಗಾಗಿ ಗಲಾಟೆ ನಡೆದಿದೆ.ಪ್ರಿಯಕರ ಜೊತೆಗೆ ಜಗಳ ಮಾಡಿದ ಯುವತಿ ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಚೈತನ್ಯ (22) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನ ಹೊಸಹಳ್ಳಿಯಲ್ಲಿ ನಡೆದಿದೆ.
ನಿನ್ನೆ ಸ್ಟೇಟಸ್ ನಲ್ಲಿ ಯುವತಿ ಚೈತನ್ಯ ರಿಲ್ಸ ಹಾಕಿದ್ದಳು. ನಿನ್ನೆ ರಾತ್ರಿ ಚೈತನ್ಯ ಮನೆಯ ಬಳಿ ಬಂದಿದ್ದ. ತಾಯಿ ಇದ್ದರೂ ಬಾಗಿಲು ಹಾಕಿಕೊಂಡು ಇಬ್ಬರೂ ಜಗಳ ಮಾಡಿದ್ದಾರೆ. ಪ್ರಿಯಕರೊಂದಿಗೆ ಜಗಳ ಆಡಿದ ನಂತರ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೈತನ್ಯ ಸಂಬಂಧಿಗೆ ಕರೆ ಮಾಡಿ ಪ್ರಿಯಕರ ವಿಜಯ್ ಈ ಕುರಿತು ವಿಚಾರ ತಿಳಿಸಿದ್ದ.
ಹೊಸಹಳ್ಳಿಯಲ್ಲಿ ತಾಯಿಯೊಂದಿಗೆ ಚೈತನ್ಯ ವಾಸವಿದ್ದಳು. ಅಂತಿಮ ಪದವಿ ವ್ಯಾಸ ಮಾಡುತ್ತಿದ್ದಳು. ಮಾಡೆಲಿಂಗ್ ಮತ್ತು ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಪಕ್ಕದ ಊರಿನ ವಿಜಯ್ ಕುಮಾರ್ ಜೊತೆಗೆ ಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಳು. ವಿಜಯ್ ಕುಮಾರ್ ಕಾರು ಚಾಲಕನಾಗಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಬಳಿಕ ವಿಜಯ್ ಕುಮಾರ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.