ಬೆಂಗಳೂರು : ಕೋಟ್ಯಾನು ಕೋಟಿ ಅಭಿಮಾನಿಗಳ ಕನಸು ಕಳೆದ 17 ವರ್ಷಗಳಿಂದ ವನವಾಸ. ಡಿಕೆ ಅವಮಾನ ಟ್ರೋಲ್ ಇದೆಲ್ಲವನ್ನು ಸಹಿಸಿ ಇದೀಗ ಐಪಿಎಲ್ ನ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದೆ. ಹೀಗಾಗಿ ಇಂದು ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ.
ಹೌದು ಟ್ರೊಫಿ ಸಮೇತ ಬೆಂಗಳೂರಿಗೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿಗೆ ಆಗಮಿಸಲಿದೆ. ಈ ಕುರಿತು ವಿರಾಟ್ ಕೊಹ್ಲಿ ಅವರು ನಿನ್ನೆನೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಮಧ್ಯಾಹ್ನ 1:30 ಕ್ಕೆ ಆರ್ಸಿಬಿ ತಂಡ ಎಚ್ ಎ ಎಲ್ ಗೆ ಬಂದು ಇಳಿಯಲಿದೆ. ಬೆಳಿಗ್ಗೆ 11 ಗಂಟೆಗೆ ಅಹಮದಾಬಾದ್ ನಿಂದ ಆರ್ಸಿಬಿ ತಂಡ ಹೊರಡಲಿದೆ. ಅಹಮದಾಬಾದ್ ನಿಂದ ನೇರವಾಗಿ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ.
ಸ್ಟಾರ್ ಏರ್ ನ ವಿಶೇಷ ವಿಮಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಹಿನ್ನೆಲೆ, ಅಹ್ಮದಾಬಾದ್ ನಿಂದ ನೇರವಾಗಿ ಎಚ್ಎಎಲ್ ಏರ್ಪೋರ್ಟಿಗೆ ಬಂದಿಳಿಯಲಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ವಿಮಾನ ಎಚ್ಎಎಲ್ ಗೆ ಬಂದು ಇಳಿಯಲಿದೆ.
“I’m going to feel the real side of it when we get to Bengaluru tomorrow and celebrate this with the city” – Virat Kohli ❤️🙌
King Kohli walks into the dressing room with ABD, talks about Rajat’s leadership, Jitesh’s smartness, and the team coming together to achieve this… pic.twitter.com/aqLY7LHvvE
— Royal Challengers Bengaluru (@RCBTweets) June 4, 2025