ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್’ನಲ್ಲಿ ನಿಯಂತ್ರಣ ರೇಖೆ (LoC) ಉದ್ದಕ್ಕೂ ಒಳನುಸುಳುವ ಪ್ರಯತ್ನವನ್ನ ಭದ್ರತಾ ಪಡೆಗಳು ಶನಿವಾರ ವಿಫಲಗೊಳಿಸಿವೆ ಮತ್ತು ಇಬ್ಬರು ಭಯೋತ್ಪಾದಕರನ್ನ ಹತ್ಯೆಗೈದಿವೆ. ಉರಿಯ ಗೋಹಲ್ಲಾನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಉರಿಯ ಗೊಹಲ್ಲಾನ್ ಪ್ರದೇಶದಲ್ಲಿ ಭಯೋತ್ಪಾದಕರ ಗುಂಪು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿರುವುದನ್ನ ಭದ್ರತಾ ಪಡೆಗಳು ಗಮನಿಸಿವೆ. ಈ ಗುಂಪನ್ನು ಭದ್ರತಾ ಪಡೆಗಳು ಪ್ರಶ್ನಿಸಿದ್ದವು. ಒಳನುಸುಳುವಿಕೆ ಪ್ರಯತ್ನವನ್ನ ವಿಫಲಗೊಳಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿದೆ.

ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ನಂತರ ಯಾತ್ರಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದು ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 33 ಜನರು ಗಾಯಗೊಂಡಿದ್ದರು.

ಭಯೋತ್ಪಾದಕರನ್ನ ಬಂಧಿಸಲು ಬೃಹತ್ ಶೋಧ ಕಾರ್ಯಾಚರಣೆಗಳನ್ನ ನಡೆಸಲಾಗ್ತಿದ್ದು, ಅಂದಿನಿಂದ ರಾಜ್ಯದಾದ್ಯಂತ ಅಲ್ಲಲ್ಲಿ ಎನ್ಕೌಂಟರ್ಗಳು ನಡೆಯುತ್ತಿವೆ.

 

 

ಪ್ರತಿದಿನ ಬೆಳಗ್ಗೆ 3 ಬಾದಾಮಿ ತಿಂದ್ರೆ ಎಷ್ಟೇಲ್ಲಾ ಪ್ರಯೋಜನಾ ಗೊತ್ತಾ.? ಇಲ್ಲಿದೆ ಮಾಹಿತಿ

ಜೂ.24ರಿಂದ ‘ದ್ವಿತೀಯ PUC’ ಪರೀಕ್ಷೆ-3 ಆರಂಭ: ‘75,995 ವಿದ್ಯಾರ್ಥಿ’ಗಳು ನೋಂದಣಿ | Karnataka 2nd PUC Exam

BREAKING : ‘Paytm’ನಿಂದ ಕಾನೂನು ಬಾಹಿರವಾಗಿ ಉದ್ಯೋಗಿಗಳ ವಜಾ ; ಕಾರ್ಮಿಕ ಸಚಿವಾಲಯಕ್ಕೆ ದೂರು

Share.
Exit mobile version