Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ: ‘ವಂಶಾವಳಿ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

BREAKING: ತಡರಾತ್ರಿ ಮಹಾರಾಷ್ಟ್ರದಲ್ಲಿ ಘೋರ ದುರಂತ: ಅಂಬೆನಾಲಿ ಘಾಟ್ ನಲ್ಲಿ ಕಂದಕಕ್ಕೆ ಸ್ಕಾರ್ಪಿಯೋ ಬಿದ್ದು 8 ಜನ ಸಾವು | Maharashtra accident

BIG UPDATE : ಭಟ್ಕಳ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ : ನೀರುಪಾಲಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಪತ್ತೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ತಡರಾತ್ರಿ ಮಹಾರಾಷ್ಟ್ರದಲ್ಲಿ ಘೋರ ದುರಂತ: ಅಂಬೆನಾಲಿ ಘಾಟ್ ನಲ್ಲಿ ಕಂದಕಕ್ಕೆ ಸ್ಕಾರ್ಪಿಯೋ ಬಿದ್ದು 8 ಜನ ಸಾವು | Maharashtra accident
INDIA

BREAKING: ತಡರಾತ್ರಿ ಮಹಾರಾಷ್ಟ್ರದಲ್ಲಿ ಘೋರ ದುರಂತ: ಅಂಬೆನಾಲಿ ಘಾಟ್ ನಲ್ಲಿ ಕಂದಕಕ್ಕೆ ಸ್ಕಾರ್ಪಿಯೋ ಬಿದ್ದು 8 ಜನ ಸಾವು | Maharashtra accident

By kannadanewsnow57

ರಾಯಗಢ್ : ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಅಂಬೇನಳಿ ಘಾಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಕಾರ್ಪಿಯೋ ಕಾರು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಲಿಬಲೇಶ್ವರ ಮತ್ತು ಪೋಲಾದ್ಪುರ ನಡುವೆ ಇರುವ ಅಂಬೇನಳಿ ಘಾಟ್ನಲ್ಲಿ ಈ ಭೀಕರ ದುರಂತ ನಡೆದಿದೆ. ಕಾರಿನಲ್ಲಿದ್ದ ಎಂಟೂ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪ್ರಸ್ತುತ ಶೋಧ ಹಾಗೂ ರಕ್ಷಣಾ ತಂಡಗಳು ಎರಡು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿವೆ.

ಅಪಘಾತಕ್ಕೀಡಾದ ಸ್ಕಾರ್ಪಿಯೋ ಎಸ್ಯುವಿ ಕಾರು ಸತಾರಾ ಜಿಲ್ಲೆಯ ಆಸಗಾಂವ್ ಗ್ರಾಮಕ್ಕೆ ಸೇರಿದ್ದಾಗಿದೆ. ಮೃತರು ದಾಪೋಲಿಯಿಂದ ಸತಾರಾ ಕಡೆಗೆ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಸುಮಾರು 500 ರಿಂದ 700 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತರೆಲ್ಲರೂ ಸತಾರಾ ಮೂಲದವರಾಗಿದ್ದು, ಕೊಂಕಣ ಅಥವಾ ಮಹಾಬಲೇಶ್ವರಕ್ಕೆ ಪ್ರವಾಸಕ್ಕೆಂದು ತೆರಳಿದ್ದರು ಎಂದು ಶಂಕಿಸಲಾಗಿದೆ.

ಮೃತರ ವಿವರಗಳು:
ಅಂಶ್ ಸಮೀರ್ ಚವಾಣ್ (19 ವರ್ಷ), ನಿವಾಸಿ: ಬೋರಗಾಂವ್, ಚಿಪ್ಲೂನ್ ತಾಲೂಕು, ರತ್ನಗಿರಿ ಜಿಲ್ಲೆ.

ರಿತೇಶ್ ರಾಜೇಂದ್ರ ಲೋಖಂಡೆ (22 ವರ್ಷ), ನಿವಾಸಿ: ಆಸಗಾಂವ್, ಸತಾರಾ ತಾಲೂಕು, ಸತಾರಾ ಜಿಲ್ಲೆ.

ಸುಹಾಸ್ ಜಿತೇಂದ್ರ ಲೋಖಂಡೆ (20 ವರ್ಷ), ನಿವಾಸಿ: ಆಸಗಾಂವ್, ಸತಾರಾ ತಾಲೂಕು, ಸತಾರಾ ಜಿಲ್ಲೆ.

ಉತ್ಕರ್ಷ್ ಆನಂದ್ ಶಿಂಗ್ಟೆ (21 ವರ್ಷ), ನಿವಾಸಿ: ಮರ್ದೆ, ಸತಾರಾ ತಾಲೂಕು, ಸತಾರಾ ಜಿಲ್ಲೆ.

ನಿಖಿಲ್ ಅಭಿಮನ್ಯು ಶಿಂಗ್ಟೆ (25 ವರ್ಷ), ನಿವಾಸಿ: ಮರ್ದೆ, ಸತಾರಾ ತಾಲೂಕು, ಸತಾರಾ ಜಿಲ್ಲೆ.

ಮಹೇಶ್ ಅನಿಲ್ ಪವಾರ್ (25 ವರ್ಷ), ನಿವಾಸಿ: ಆಸಗಾಂವ್, ಸತಾರಾ ತಾಲೂಕು, ಸತಾರಾ ಜಿಲ್ಲೆ.

ಆದಿತ್ಯ ಅಶೋಕ್ ಸಾಳುಂಖೆ (21 ವರ್ಷ), ನಿವಾಸಿ: ಆಸಗಾಂವ್, ಸತಾರಾ ತಾಲೂಕು, ಸತಾರಾ ಜಿಲ್ಲೆ.

ರಾಜೇಶ್ ಅಶೋಕ್ ಕಟ್ಕರ್ (35 ವರ್ಷ), ನಿವಾಸಿ: ಖಟಾವ್, ಖಟಾವ್ ತಾಲೂಕು, ಸತಾರಾ ಜಿಲ್ಲೆ.

ರಾಯಗಢ್ ಮತ್ತು ಸತಾರಾ ಜಿಲ್ಲೆಗಳ ಗಡಿಯಲ್ಲಿರುವ ಅಂಬೇನಳಿ ಘಾಟ್ ಅತ್ಯಂತ ಅಪಾಯಕಾರಿ ವಲಯವಾಗಿದ್ದು, ಇಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿರುತ್ತವೆ.

ಘಟನಾ ಸ್ಥಳಕ್ಕೆ ಸ್ಥಳೀಯ ಆಡಳಿತ, ಚಾರಣಿಗರು (Trekkers) ಮತ್ತು ರಕ್ಷಣಾ ತಂಡಗಳು ಧಾವಿಸಿವೆ. ಆದರೆ, ಕಂದಕವು ತೀವ್ರ ಆಳವಾಗಿರುವುದು ಮತ್ತು ದುರ್ಗಮ ಪ್ರದೇಶವಾಗಿರುವುದರಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ. ರಾತ್ರಿಯ ಕತ್ತಲಿನಲ್ಲಿ ಮೃತದೇಹಗಳ ಪತ್ತೆ ಕಾರ್ಯ ಕಠಿಣವಾಗಿತ್ತು. ಸದ್ಯ ಮುಂಜಾನೆ ಬೆಳಕು ಹರಿದಿರುವುದರಿಂದ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ ಮತ್ತು ಉಳಿದ ಮೃತದೇಹಗಳಿಗಾಗಿ ಹುಡುಕಾಟ ಮುಂದುವರಿದಿದೆ.

BREAKING: Tragic accident in Maharashtra late at night: 8 people died after Scorpio falls into a ditch at Ambenali Ghat
Share. Facebook Twitter LinkedIn WhatsApp Email

Related Posts

SHOCKING : ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನ ಹತ್ಯೆ : JCBಯಿಂದ ಶವ ಹೂತ ಪತ್ನಿ, ಪ್ರಿಯಕರ!

2 Mins Read

ವಿಶ್ವ ಥೈರಾಯ್ಡ್ ದಿನ 2026:ಬೇಸಿಗೆಯ ಹೀಟ್‌ವೇವ್‌ ಜಾಗ್ರತೆ! ತೀವ್ರ ನಿರ್ಜಲೀಕರಣದಿಂದ ಥೈರಾಯ್ಡ್ ಸಮಸ್ಯೆ ಉಲ್ಬಣ : ತಜ್ಞರ ಎಚ್ಚರಿಕೆ

2 Mins Read

ALERT : ಬೀಸಿಲ ಬೇಗೆಗೆ ಜನರು ತತ್ತರ : 48 ಡಿಗ್ರಿಗೆ ತಲುಪಿದ ತಾಪಮಾನ,ದೇಶಾದ್ಯಂತ ‘ಹೀಟ್ ಸ್ಟ್ರೋಕ್’ ತೀವ್ರ ಎಚ್ಚರಿಕೆ | Heat stroke

2 Mins Read
Recent News

ಸಾರ್ವಜನಿಕರೇ ಗಮನಿಸಿ: ‘ವಂಶಾವಳಿ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

BREAKING: ತಡರಾತ್ರಿ ಮಹಾರಾಷ್ಟ್ರದಲ್ಲಿ ಘೋರ ದುರಂತ: ಅಂಬೆನಾಲಿ ಘಾಟ್ ನಲ್ಲಿ ಕಂದಕಕ್ಕೆ ಸ್ಕಾರ್ಪಿಯೋ ಬಿದ್ದು 8 ಜನ ಸಾವು | Maharashtra accident

BIG UPDATE : ಭಟ್ಕಳ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ : ನೀರುಪಾಲಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಪತ್ತೆ.!

SHOCKING : ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನ ಹತ್ಯೆ : JCBಯಿಂದ ಶವ ಹೂತ ಪತ್ನಿ, ಪ್ರಿಯಕರ!

State News
KARNATAKA

ಸಾರ್ವಜನಿಕರೇ ಗಮನಿಸಿ: ‘ವಂಶಾವಳಿ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

By kannadanewsnow57 KARNATAKA 2 Mins Read

ಬೆಂಗಳೂರು: ಕುಟುಂಬದ ಆಸ್ತಿ ಹಂಚಿಕೆ, ಪಿಂಚಣಿ ಸೌಲಭ್ಯ ಅಥವಾ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಸಾಬೀತುಪಡಿಸಲು ‘ವಂಶವೃಕ್ಷ’ ಅಥವಾ ‘ವಂಶಾವಳಿ ಪ್ರಮಾಣಪತ್ರ’…

BIG UPDATE : ಭಟ್ಕಳ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ : ನೀರುಪಾಲಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಪತ್ತೆ.!

BREAKING : ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ : ನೊಣವಿನಕೆರೆ ಕಾಡಸಿದ್ದೇಶ್ವರ ಸ್ವಾಮೀಜಿ ಭವಿಷ್ಯ!

ಚಿಕನ್, ಮಟನ್ ತಿಂದರೆ ಬಿಪಿ ಹೆಚ್ಚಾಗುತ್ತಾ..? ಮಾಂಸಾಹಾರಿಗಳು ಈ ವಿಷಯ ತಿಳಿಯಲೇಬೇಕು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.