ನವದೆಹಲಿ: ಕಳೆದ ತಿಂಗಳು ಇರಾನ್’ನಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನ ಉಲ್ಲೇಖಿಸಿ ಭಾರತದಲ್ಲಿನ ಇರಾನಿನ ರಾಯಭಾರ ಕಚೇರಿ ತಿಳಿಸಿದೆ. ಟೆಹ್ರಾನ್ ಪೊಲೀಸರು ಕಾಣೆಯಾದ ವ್ಯಕ್ತಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ದೃಢಪಡಿಸಿದೆ.
“ಕಾಣೆಯಾಗಿದ್ದ ಮೂವರು ಭಾರತೀಯ ನಾಗರಿಕರನ್ನ ಟೆಹ್ರಾನ್ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇರಾನ್’ನಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ಪುರುಷರನ್ನ ಪೊಲೀಸರು ಪತ್ತೆ ಮಾಡಿ ಬಿಡುಗಡೆ ಮಾಡಿದ್ದಾರೆ ಎಂದು ಇರಾನ್ನ ಸ್ಥಳೀಯ ಮಾಧ್ಯಮಗಳು ತಿಳಿಸಿವೆ” ಎಂದು ಇರಾನ್ ರಾಯಭಾರ ಕಚೇರಿ ಪೋಸ್ಟ್ ಮಾಡಿದೆ.
ಜಸ್ಪಾಲ್ ಸಿಂಗ್, ಹುಶನ್ಪ್ರೀತ್ ಸಿಂಗ್ ಮತ್ತು ಅಮೃತ್ಪಾಲ್ ಸಿಂಗ್ ಎಂದು ಗುರುತಿಸಲಾದ ಈ ಮೂವರು ವ್ಯಕ್ತಿಗಳು ಪಂಜಾಬ್ ಮೂಲದವರಾಗಿದ್ದು, ಮೇ 1 ರಂದು ಟೆಹ್ರಾನ್’ನಲ್ಲಿ ಬಂದಿಳಿದ ಸ್ವಲ್ಪ ಸಮಯದ ನಂತರ ಕಣ್ಮರೆಯಾಗಿದ್ದರು.
GOOD NEWS : ರಾಜ್ಯದ ಪಿಯು ಕಾಲೇಜುಗಳಿಗೆ 4689 `ಅತಿಥಿ ಉಪನ್ಯಾಸಕರ’ ನೇಮಕ : ಮಾಸಿಕ 14,000 ರೂ. ವೇತನ.!
ಏನಿದು ‘ಕೃಷಿ ಭಯೋತ್ಪಾದನೆ’.? ಇದೆಷ್ಟು ಅಪಾಯಕಾರಿ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!