ಬೆಂಗಳೂರು : ಬ್ಯಾಗ್ ನಲ್ಲಿ ಬಾಂಬ್ ಇದೆ ಮುಟ್ಟಬೇಡಿ ಎಂದು ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಹೈಡ್ರಾಮಾ ನಡೆಸಿರುವ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಭೇಟಿಗಾಗಿ ಸಿಎಂ ನಿವಾಸಕ್ಕೆ ಬಂದಿದ್ದ ವ್ಯಕ್ತಿಯೊರ್ವನನ್ನು ಪೊಲೀಸರು ಬಿಟ್ಟಿಲ್ಲ. ಈ ವೇಳೆ ಗಡ್ಡ ಬಿಟ್ಟಿದ್ದ ವ್ಯಕ್ತಿಯೊಬ್ಬರು ಕೈಯಲ್ಲಿ ಚೀಲ ಹಿಡಿದುಕೊಂಡಿದ್ದರು. ಪೊಲೀಸರು ಮುಟ್ಟಲು ಹೋದ ವೇಳೆ ಮುಟ್ಟಬೇಡಿ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಹೇಳಿ ಹೈಡ್ರಾಮಾ ನಡೆಸಿದ್ದಾನೆ.
ವ್ಯಕ್ತಿಯ ಈ ಮಾತು ಕೇಳಿ ಪೊಲೀಸರು ತಬ್ಬಿಬ್ಬು ಆಗಿದ್ದು, ಕೂಡಲೇ ವ್ಯಕ್ತಿಯ ವಿಚಾರಣೆ ಮಾಡಿ, ಆ ವ್ಯಕ್ತಿಯನ್ನು ಸ್ಥಳದಿಂದ ವಾಪಸ್ ಕಳಿಸಿದ್ದಾರೆ.