ಬೆಂಗಳೂರು : ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಎಸ್ಐ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೌದು ಬೆಂಗಳೂರಿನ ತಲಘಟ್ಟಪುರ ಪಿಎಸ್ಐ ಮೆಹಬೂಬ್ ಗುಡಳ್ಳಿ (40) ಇದೀಗ ಸಾವನ್ನಪ್ಪಿದ್ದಾರೆ. ಗಾಂಜಾ ಆರೋಪಿಗಳನ್ನು ಬಂಧಿಸಿ ಕರೆತರುವ ವೇಳೆ ಈ ಒಂದು ಘಟನೆ ನಡೆದಿತ್ತು.
ರಾತ್ರಿಯ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕರೆ ತರುವಾಗ ಅಪಘಾತ ಸಂಭವಿಸಿದೆ. ಜೂನ್ 24 ರಾತ್ರಿ ಅತ್ತಿಬೆಲೆಯಿಂದ ಪಿಎಸ್ಐ ಮಹಿಬೂಬ್ ಹೊರಟಿದ್ದಾರೆ ಅತಿ ಬೆಲೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಕಾರಿನ ಬ್ರೇಕ್ ಡೌನ್ ಆಗುತ್ತದೆ. ಈ ವೇಳೆ ಕಾರು ಪರೀಕ್ಷೆ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದಂತಹ ಲಾರಿ ಕಾರಿಗೆ ಗುದ್ದಿದ್ದರಿಂದ ಮೆಹಬೂಬ್ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಮೆಹಬೂಬ್ ಸಾವನಪ್ಪಿದ್ದಾರೆ.