ಗದಗ : ಕಳೆದ 2024 ಡಿಸೆಂಬರ್ 16ರಂದು ಗದಗ ಜಿಲ್ಲೆಯಲ್ಲಿ ಯುವತಿಯ ಭೀಕರ ಕೊಲೆಯಾಗಿತ್ತು. ಇದೀಗ ಈ ಒಂದು ಕೊಲೆ ಪ್ರಕರಣವನ್ನು ಬೆಟಗೇರಿ ಪೊಲೀಸರು ಆರು ತಿಂಗಳ ಬಳಿಕ ಭೇದಿಸಿದ್ದು, ದೃಶ್ಯ ಸಿನಿಮಾ ಮಾದರಿಯಲ್ಲಿ ಯುವತಿಯ ಪ್ರಿಯಕರ ಸಾಕ್ಷಿ ನಾಶ ಮಾಡಿದ್ದ. ಆದರೆ ಕೇವಲ ಒಂದೇ ಒಂದು ಮೆಸೇಜಿನಿಂದ ಇದೀಗ ಆರೋಪಿ ಪ್ರಿಯಕರ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನು ಪ್ರಿಯಕರ ಕೊಂದಿದ್ದ. ದೃಶ್ಯ ಸಿನಿಮಾ ಮಾದರಿ ಸಾಕ್ಷಿ ನಾಶ ಮಾಡುತ್ತಿದ್ದ. ಇದೀಗ ಒಂದೇ ಒಂದು ಮೆಸೇಜಿನಿಂದ ಕೊಲೆ ಆರೋಪಿ ಇದೀಗ ಅರೆಸ್ಟ್ ಆಗಿದ್ದಾನೆ. ಬೆಟಗೇರಿ ಬಡಾವಣೆ ಪೊಲೀಸ್ ಕಾರ್ಯಾಚರಣೆಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕೊಲೆಯಾದ ಮಧುಶ್ರೀ ಪ್ರಿಯಕರ ಸತೀಶ್ ಗೆ ಮದುವೆಗೆ ಒತ್ತಾಯಿಸಿದ್ದಳು.
ಹಾಗಾಗಿ ಬೆಂಗಳೂರಿಗೆ ಹೋಗೋಣ ಎಂದು 2024 ಡಿಸೆಂಬರ್ 16ರಂದು ಪ್ರಿಯಕರ ಯುವತಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ. ಇದೀಗ ಬೆಟಗೇರಿ ಬಡಾವಣೆ ಪೊಲೀಸ್ರು ಕೇವಲ ಒಂದೇ ಒಂದು ಮೆಸೇಜ್ ನಿಂದ ಪ್ರಕರಣವನ್ನು ಭೇಧಿಸಿದ್ದು ಪ್ರಿಯಕರ ತಾನೆ ಕೊಲೆ ಮಾಡಿ ಹಳ್ಳದಲ್ಲಿ ಶವ ಹೂತು ಹಾಕಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಬಳಿಕ ಹಂತಕ ಮಧುಶ್ರೀ ದೇಹದ ಅಂಗಗಳನ್ನು ಬೇರೆ ಬೇರೆ ಕಡೆಗೆ ಮಣ್ಣು ಮಾಡಿದ್ದ ಆದರೆ ಇದುವರೆಗೂ ರುಂಡ ಮಾತ್ರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.