ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಕಿರುತೆರೆ ನಟ ಮಡೇನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ಹಾಸನದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿ ಇದೀಗ ಠಾಣೆಗೆ ಕರೆತಂದಿದ್ದಾರೆ. ಅತ್ಯಾಚಾರ ಆರೋಪ ಮಾಡಿರುವ ಕಿರುತೆರೆ ನಟಿ ಮನು ವಿರುದ್ಧ ಮತ್ತಷ್ಟು ಗಂಭೀರವಾದ ಆರೋಪ ಮಾಡಿದ್ದು, ಮನು ವಶೀಕರಣ ಮಾಡುತ್ತಿದ್ದ, ಬೂದಿ ಎರಚುತಿದ್ದ ಎಂದು ಹೇಳಿಕೆ ನೀಡಿದ್ದಾರೆ.
ಕಿರುತೆರೆ ಕಲಾವಿದ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಡೆನೂರು ಮನು ವಿರುದ್ಧ ಆರೋಪಿಸಿದ್ದ ಯುವತಿ ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದು, ಮಡೆನೂರು ಮನು ವಶೀಕರಣ ಮಾಡುತ್ತಿದ್ದ ಬೂದಿ ಎರಚುತಿದ್ದ. ಮನು ಎರಡು ಬಾರಿ ನನಗೆ ಗರ್ಭಪಾತ ಮಾಡಿಸಿದ್ದಾನೆ. ನನ್ನ ಹೆಂಡತಿ ನನಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಹೇಳುತ್ತಿದ್ದ. ಸರಿ ಮಾಡಿಕೊಳ್ಳುವುದಾಗಿ ಕಷ್ಟಪಡುತ್ತಿದ್ದೇನೆ ಎಂದು ಹೇಳುತ್ತಿದ್ದ.
ಮಡೆನೂರು ಮನುಗಾಗಿ ನಾನೇ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಮನುಗೆ ಜಿಮ್ ಹೋಗಲು ಸಹ ನಾನೇ ದುಡ್ಡು ಕೊಟ್ಟಿದ್ದೇನೆ. ಮುಂದಿನ ಸಿನಿಮಾ ತಮನ್ನಾ ಜೊತೆಗೆ ಎಂದು ಮನು ಹೇಳಿಕೊಳ್ಳುತ್ತಿದ್ದ. ನೀನು ದಪ್ಪ ಇದಿಯಾ ಎಂದು ಮಡೆನೂರು ಮನು ನನಗೆ ಹೀಯಾಳಿಸುತ್ತಿದ್ದ. ಲೇಡಿ ಡಾನ್ ಹೀರೊ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಡ್ರಿಂಕ್ಸ್ ತಂದು ನನಗೂ ಕೊಡಿಸಿ ಖಾಸಗಿ ವಿಡಿಯೋ ಮಾಡ್ಕೊಂಡಿದ್ದಾನೆ. ನನಗೆ ಹುಷಾರಿಲ್ಲ ಅಂತ ಗೊತ್ತಿದ್ದರೂ ಸಹ ನನ್ನ ಯೋಗ ಕ್ಷೇಮ ವಿಚಾರಿಸಲಿಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿ ತಾಳಿ ಕಟ್ಟಿದರೆ ಅದಕ್ಕೆ ಏನು ಬೆಲೆ ಇದೆ? ಎಂದು ಸಂತ್ರಸ್ತೆ ಕಿಡಿ ಕಾರಿದ್ದಾಳೆ.
ಪೊಲೀಸರಿಗೆ ದೂರು ನೀಡುತ್ತೇನೆ ಎಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನನ್ನು ಕೊಲೆ ಮಾಡುವುದಾಗಿ ಮಡೆನೂರು ಮನು ಬೆದರಿಸುತ್ತಿದ್ದ.ನಾನು ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ ಅಂತ ಹೇಳ್ತಿದ್ದ. ಶನಿವಾರ ಬಂದು ನನ್ನ ಮೇಲೆ ಮತ್ತೆ ಅತ್ಯಾಚಾರ ಎಸಗಿ ಹೋಗಿದ್ದಾನೆ. ನನ್ನ ಪತ್ನಿಗೆ ವಿಚ್ಛೇದನ ನೀಡಿ, ನಿನ್ನನ್ನು ಮದುವೆ ಆಗುತ್ತೇನೆ ಅಂತ ಹೇಳಿದ್ದ. ದುಡ್ಡಿಗೋಸ್ಕರ ಆರೋಪ ಮಾಡಿದ್ದಾಳೆ ಎಂದು ಮನು ಹೇಳುತ್ತಿದ್ದಾನೆ.ಮಡೆನೂರು ಮನು ಗಾಗಿ ನಾನೇ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ನಾನ್ಯಾಕೆ ದುಡ್ಡಿಗೆ ಡಿಮ್ಯಾಂಡ್ ಮಾಡಲಿ? ಎಂದು ಸಂತ್ರಸ್ತೆ ಆಕ್ರೋಶ ಹೊರಹಾಕಿದ್ದಾಳೆ.