ದಾವಣಗೆರೆ : ದಾವಣಗೆರೆಯಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ಒಂದು ನಡೆದಿದ್ದು ಯುವಕನೊಬ್ಬ ತನ್ನ ಪತ್ನಿಯ ಮಲತಾಯಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು ಅಲ್ಲದೆ ಇಂದು ಪತ್ನಿಯನ್ನು ಬಿಟ್ಟು ಅತ್ತೆಯ ಜೊತೆಗೆ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಹೌದು 55 ವರ್ಷದ ಮಹಿಳೆಯ ಜೊತೆಗೆ ಯುವಕ ಪರಾರಿಯಾಗಿದ್ದಾನೆ. ಆಂಟಿಯ ಮೇಲೆ 25 ವರ್ಷದ ಯುವಕನಿಗೆ ಪ್ರೀತಿ ಹುಟ್ಟಿದ್ದು, ಇದೊಂದು ಸಿನಿಮಾ ಸ್ಟೋರಿಯನ್ನೇ ಈ ಒಂದು ಕಥೆ ಮೀರಿಸುವಂತಿದೆ. ಮಲತಾಯಿ ಶಾಂತ ಜೊತೆಗೆ ಯುವಕ ಗಣೇಶ್ ಎಸ್ಕೇಪ್ ಆಗಿದ್ದಾನೆ. ದಾವಣಗೆರೆ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿ ಇದೊಂದು ಘಟನೆ ನಡೆದಿದೆ.
ಚೆನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ ಮೇ 12 ರಂದು ಪತ್ನಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಅತ್ತೆ ಶಾಂತಾ ಜೊತೆ ಪರಾರಿಯಾಗಿದ್ದಾನೆ. ಮಹಿಳೆ ಶಾಂತ ಜೊತೆಗೆ ಗಣೇಶ್ ಪರಾರಿಯಾಗಿದ್ದಾನೆ. 25 ವರ್ಷದ ಯುವಕನಾಗಿರುವ ಗಣೇಶ ಹೆಂಡತಿಯ ಮಲತಾಯಿಯ ಜೊತೆ ಪರಾರಿಯಾಗಿದ್ದಾನೆ. ಗಣೇಶ್ ಪತ್ನಿ ಹೇಮಾಳ ಮಲತಾಯಿ ಆಗಿರುವ ಶಾಂತ ಮುದ್ದೇನಹಳ್ಳಿ ನಿವಾಸಿಯಾಗಿದ್ದಾರೆ.
ಇನ್ನು ಯುವಕ ಗಣೇಶ್ ಪತ್ನಿ ಹೇಮಾ ತಂದೆ ನಾಗರಾಜ ಜೊತೆ ಶಾಂತ ಎರಡನೇ ಮದುವೆಯಾಗಿದ್ದಾರೆ. ನಾಗರಾಜ್ ಮೊದಲ ಪತ್ನಿಯ ಮಗಳು ಹೇಮಾ ಆಗಿದ್ದು ಮದುವೆಯಾದ ಬಳಿಕ ಶಾಂತ ಮತ್ತು ಗಣೇಶ ಅಕ್ರಮ ಸಂಬಂಧ ಹೊಂದಿದ್ದರು. ಶಾಂತ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಇದೀಗ ಶಾಂತ ಮತ್ತು ಗಣೇಶ್ ಇಬ್ಬರು ಪರಾರಿಯಾಗಿದ್ದಾರೆ.