ಕೇರಳ : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಕೇರಳದಲ್ಲಿ ದುರಂತ ಒಂದು ಸಂಭವಿಸಿದ್ದು ಯುವಕನೊಬ್ಬನಿಗೆ ಆರ್ ಎಸ್ ಎಸ್ ಕಾರ್ಯಕರ್ತ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಕೇರಳದಲ್ಲಿ ಟೆಕ್ಕಿ ಆನಂದ್ ಎನ್ನುವ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು ಇನ್ಸ್ಟಾಗ್ರಾಮ್ ನಲ್ಲಿ ಯುವಕ ಆನಂದ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರ್ ಎಸ್ ಎಸ್ ಸದಸ್ಯರಿಂದ ಲೈಂಗಿಕ ಕಿರುಕುಳ ಎಂದು ಆರೋಪ ಮಾಡಿರುವ ಆತ ನಿರಂತರವಾಗಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಕೇರಳದ ತಿರುವನಂತಪುರ ಲಾಡ್ಜ್ ನಲ್ಲಿ ಆನಂದ್ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕಳೆದ ಗುರುವಾರ ಸಂಜೆ ಈ ಒಂದು ಘಟನೆ ನಡೆದಿದೆ ಆನಂದ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಅದೇ ದಿನ ಇನ್ಸ್ಟಾಗ್ರಾಮ್ ನಲ್ಲಿ ಆನಂದ್ ಪೋಸ್ಟ್ ಕೂಡ ಮಾಡಿದ್ದಾನೆ. ಬಾಲ್ಯದಲ್ಲಿಯೇ ಆರ್ ಎಸ್ ಎಸ್ ನಿಂದ ದೌರ್ಜನ್ಯ ಅನುಭವಿಸಿದ ಕುರಿತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ನಾನು ನಿರಂತರವಾಗಿ ಆರ್ಎಸ್ಎಸ್ ಶಿಫಾರಗಳಲ್ಲಿ ಲೈಂಗಿಕ ದೌರ್ಜನ್ಯ ಅನುಭವಿಸ್ತಾ ಇದ್ದೇನೆ. ಕಿರುಕುಳ ತಾಳಲಾರದೆ ಖಿನ್ನತೆಗೆ ಒಳಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ದೇಶದಲ್ಲಿರುವಂತಹ ಆರ್ ಎಸ್ ಎಸ್ ಶಿಬಿರಗಳಲ್ಲಿ ಅನೇಕರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಈ ಒಂದು ಕಿರುಕುಳ ತಡೆಯಲಾರದೆ ನಾನು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾನೆ.
ಇನ್ನು ಟೆಕ್ಕಿ ಆನಂದ್ ಆತ್ಮಹತ್ಯೆಗೆ ಸಂಬಂಧಪಟ್ಟಂತೆ, ಪ್ರಿಯಾಂಕ ಗಾಂಧಿ ಕೂಡ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ. ನನ್ನಂತೆ ತುಂಬಾ ಸಂತ್ರಸ್ತರು ಇದ್ದಾರೆ ಅಂತ ಟೆಕ್ಕಿ ಆನಂದ ಹೇಳಿದ್ದ. ಆರ್ ಎಸ್ ಎಸ್ ಕ್ಯಾಂಪ್ ಗಳಲ್ಲಿ ಕಿರುಕುಳ ನೀಡ್ತಿದೆ ಅಂತ ಉಲ್ಲೇಖಿಸಿದ್ದಾನೆ. ಲಕ್ಷಾಂತರ ಬಾಲಕರು ಆರ್ ಎಸ್ ಕ್ಯಾಂಪ್ ಗಳಿಗೆ ತೆರಳುತ್ತಾರೆ ಆರ್ ಎಸ್ ಎಸ್ ನಾಯಕರು ತಕ್ಷಣವೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಬೇಕು. ಇಂತಹ ಹೀನ ಕೃತ್ಯದ ಬಗ್ಗೆ ಮೌನ ಮರಿಯಬೇಕು ಅಂತ ಟ್ವೀಟ್ ಮೂಲಕ ಸಂಸದೆ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
The RSS must allow these allegations to be investigated fully. In his suicide message Anandu Aji alleged that he was abused again and again by multiple members of the RSS.
He clearly stated that he was not the only victim and rampant sexual abuse is taking place in RSS camps.… pic.twitter.com/IS4dDaQv7O
— Priyanka Gandhi Vadra (@priyankagandhi) October 12, 2025