Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

10/04/2026 10:34 PM

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮೇ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
INDIA

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮೇ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

By kannadanewsnow0522/04/2025 3:33 PM

ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸಿದ್ದಾರ್ಥ್ ಲೂಥ್ರಾ ವಾದಿಸಿದರೆ, ನಟ ದರ್ಶನ್ ಪರವಾಗಿ ಅಭಿಷೇಕ್ ಮನುಸಿಘವಿ ವಾದಿಸಿದರು. ವಾದ ಪ್ರತಿವಾದ ಬಳಿಕ ವಿಚಾರಣೆ ನಡೆಸಿದ ನ್ಯಾ. ಜೆಬಿ ಪರ್ದಿವಾಲಾ ಹಾಗು ನ್ಯಾ. ಮಹದೇವನ್ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ಮೇ 14ಕ್ಕೆ ಮಂದೂಡಿ ಆದೇಶಿಸಿತು.

ವಿಚಾರಣೆ ಆರಂಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಕೀಲ ಸಿದ್ಧಾರ್ಥ ಲೂಥ್ರಾ ಅವರು ವಾದ ಮಂಡಿಸಿದರು.ಈ ವೇಳೆ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆಯಾ? ಎಂದು ಜಡ್ಜ್ ಪ್ರಶ್ನಿಸಿದರು. ಹೌದು ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆ ಎಂದು ಸಿದ್ಧಾರ್ಥ ಲೂಥ್ರಾ ಅವರು ಜಡ್ಜ್ ಅವರಿಗೆ ತಿಳಿಸಿದರು. ಆರೋಪಿ ಏನು ರಾಜಕಾರಣಿಯಾ? ಎಂದು ಮರು ಪ್ರಶ್ನಿಸಿದರು. ರಾಜಕಾರಣಿ ಅಲ್ಲ ಜನಪ್ರಿಯ ನಟ ಎಂದು ಸಿದ್ಧಾರ್ಥ ಲೂಥ್ರಾ ಅವರು ತಿಳಿಸಿದರು.

ನಂತರ ಪಟ್ಟಣಗೆರೆ ಶೆಡ್ ಬಳಿ ನಡೆದ ಘಟನೆಯನ್ನು ಸಿದ್ಧಾರ್ಥ ಲೂಥ್ರಾ ಅವರು ಜಡ್ಜ್ ಅವರಿಗೆ ವಿವರಿಸಿದರು. ಎಲೆಕ್ಟ್ರಾನಿಕ್ ಎವಿಡೆನ್ಸ್ ಇದೆ. ಅಲ್ಲದೆ ಸಿಸಿಟಿವಿ ದೃಶ್ಯಗಳು ಕೂಡ ಸಿಕ್ಕಿವೆ. ಮೊದಲ ಆರೋಪಿ ಪವಿತ್ರಾಗೌಡ ಮಾಡಿರುವ ಮೆಸೇಜ್ ಗಳು ಇವೆ ಎಂದರು. ಈ ವೇಳೆ ಮರಣೋತ್ತರ ಪರೀಕ್ಷೆಯ ವರದಿ ಕೊಡಿ ಎಂದು ಜಡ್ಜ್ ಕೇಳಿದರು. ಮೃತದೇಹ ಎಲ್ಲಿ ಸಿಕ್ಕಿದೆ? ಮತ್ತು ದೇಹ ನೋಡಿದವರು ಯಾರು? 11 ದಿನಗಳ ಬಳಿಕ ನೀಡಿದ್ದಾರೆ. ಅಲ್ಲಿಯವರೆಗೆ ಏನು ಮಾಡುತ್ತಿದ್ದರು? 7 ಜನರು ಹೆಸರು ಹೇಳಿದ್ದಾರಾ? ಸಂತ್ರಸ್ತನನ್ನು ಎಲ್ಲಿಂದ ಕರೆದುಕೊಂಡು ಬರಲಾಯಿತು? ಎಂದು ನ್ಯಾಯಾಧೀಶರು ಸರ್ಕಾರದ ಪರ ವಕೀಲ ಸಿದ್ಧಾರ್ಥ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.

ನ್ಯಾಯಾಧೀಶರ ಪ್ರಶ್ನೆಗೆ ಸಿದ್ದಾರ್ಥ್ ಲೂಥ್ರಾ ಅವರು ಉತ್ತರಿಸಿದರು. ಶೆಡ್ ನಲ್ಲಿ ಹತ್ಯೆ ನಡೆದಿದೆ. ನಂತರ ಅಪಾರ್ಟ್ಮೆಂಟ್ ಬಳಿ ದೇಹ ಸಿಕ್ಕಿದೆ. ರೇಣುಕಾ ಸ್ವಾಮಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಮೂಳೆಗಳು ಮುರಿದಿವೆ. ರಕ್ತ ಸುರಿದಿದೆ ಅಲ್ಲದೆ ಮರ್ಮಾಂಗಕ್ಕೆ ಗಂಭೀರವಾದ ಗಾಯಗಳಾಗಿವೆ. ದೇಹದ ಪ್ರಮುಖ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಜಡ್ಜ್ ಅವರಿಗೆ ಸಂಪೂರ್ಣವಾಗಿ ವಿವರಿಸಿದರು.ಪವಿತ್ರ ಗೌಡ ದರ್ಶನ್ ಪತ್ನಿಯೇ ಎಂದು ಜಡ್ಜ್ ಪ್ರಶ್ನಿಸಿದರು. ಅಲ್ಲ ಮಿಸ್ಟ್ರೆಸ್ ಎಂದು ಸಿದ್ಧಾರ್ಥ ಲೂಥ್ರಾ ಉತ್ತರಿಸಿದರು. ದರ್ಶನ್ ಗೆ ಮದುವೆಯಾಗಿದೆಯೇ ಎಂದು ನ್ಯಾಯಾಧೀಶರು ಮರು ಪ್ರಶ್ನಿಸಿದಾಗ ಹೌದು ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಅವರು ಉತ್ತರಿಸಿದರು.

ಸಿದ್ದಾರ್ಥ್ ಲೂಥ್ರಾ ಬಳಿಕ ಕೊಲೆಯ 2ನೇ ಆರೋಪಿಯಾದ ದರ್ಶನ್ ಪರವಾಗಿ ಅಭಿಷೇಕ್ ಮನುಸಿಂಘವಿ ಅವರು ವಾದ ಆರಂಭಿಸಿದರು. ನಟ ದರ್ಶನ್ ಅಭಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಯಾವ ಜಾಗದಲ್ಲಿಯೂ ಸಾಕ್ಷ್ಯಾಧಾರಗಳು ಇಲ್ಲ. ದರ್ಶನ್ ಅತ್ತೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆಗ ಹತ್ಯೆ ಮಾಡಿದ್ದಕ್ಕೆ ಫೋಟೋಗಳಿವೆ ಎಂದು ಸಿದ್ದಾರ್ಥ್ ಲೂಥ್ರಾ ತಿಳಿಸಿದರು. ಈ ವೇಳೆ ಯಾವ ಫೋಟೋ ಎಂದು ನ್ಯಾಯಾಧೀಶರು ಕೇಳಿದರು.ದರ್ಶನ್ ವಿಡಿಯೋದಲ್ಲಿಲ್ಲ. ದರ್ಶನ್ ಮೊಬೈಲ್ನಿಂದ ವಿಡಿಯೋ ಮಾಡಿಲ್ಲ ರೇಣುಕಾಸ್ವಾಮಿ ಕೊಲೆಗೂ ಹಾಗೂ ನಟ ದರ್ಶನ್ ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. 3 ಸೆಕೆಂಡ್ ವಿಡಿಯೋ ಇದೆ ಎನ್ನುತ್ತಿದ್ದಾರೆ. ಅದರಲ್ಲಿ ಏನು ಗೊತ್ತಾಗುತ್ತದೆ ಸಾಕ್ಷ ಎಂದು ಹೇಗೆ ಅದನ್ನು ಪರಿಗಣಿಸಲಾಗುತ್ತದೆ? ಎಂದು ನಟ ದರ್ಶನ್ ಪರವಾಗಿ ಅಭಿಷೇಕ್ ಮನುಸಿಂಘವಿ ವಾದ ಮಂಡಿಸಿದರು.

ದರ್ಶನ್ ವಿಡಿಯೋ ನೋಡಿಲ್ಲ. ಐವಿಟ್ನೆಸ್ ಗಳ ಹೇಳಿಕೆಯನ್ನು ಪಡೆಯದೆ ನಟ ದರ್ಶನ್ ಬಂಧಿಸಲಾಗಿದೆ. ಬಂಧಿಸಿದ ಬಳಿಕ ಐವೀಟ್ನೆಸ್ ಗಳ ಹೇಳಿಕೆ ಪಡೆಯಲಾಗಿದೆ. ಪಾರ್ಕಿಂಗ್ ಪ್ಲೇಸ್ ನಲ್ಲಿ ಹತ್ಯೆಯಾಗಿದೆ ಎನ್ನುತ್ತಿದ್ದಾರೆ. ಆ ಜಾಗದ ಮಾಲೀಕ ನಾನು ಅಲ್ಲ ಆ ಜಾಗಕ್ಕೂ ನನಗೂ ಸಂಬಂಧ ಅಲ್ಲ ದರ್ಶನ್ ಬಂಧಿಸಲು ಯಾವುದೇ ಕಾರಣಗಳು ಇರಲಿಲ್ಲ ಎಂದು ದರ್ಶನ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘವಿ ವಾದ ಮಂಡಿಸಿದರು.ನೀವು ಪಾರ್ಕಿಂಗ್ ಎನ್ನುತ್ತಿದ್ದೀರಿ ಸಿದ್ದಾರ್ಥ್ ಅವರು ಶೆಡ್ ಎನ್ನುತ್ತಿದ್ದಾರೆ. ಆ ಜಾಗ ಏನು ಎನ್ನುವುದನ್ನು ಸರಿಯಾಗಿ ವಿವರಿಸಿ ಎಂದು ಜಡ್ಜ್ ಕೇಳಿದರು. ಹತ್ಯೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎಂದು ನಿಮಗೆ ಹೇಗೆ ಅನ್ನಿಸಿತು? ಯಾವ ಲೀಡ್ ನಿಮಗೆ ಸಿಕ್ತು? ಎಂದು ಜಡ್ಜ್ ಪ್ರಶ್ನಿಸಿದರು. ಪಾರ್ಕಿಂಗ್ ಜಾಗದ ಮಾಲೀಕರು ಯಾರು? ಎಂದಾಗ 8ನೇ ಆರೋಪಿ ಅಂಕಲ್ ಜಾಗ ಎಂದು ಅಭಿಷೇಕ್ ಅವರು ಜಡ್ಜ್ ಅವರಿಗೆ ತಿಳಿಸಿದರು.

ಲೇಡಿ ಪವಿತ್ರಗೌಡ ಶೆಡ್ ನಲ್ಲಿ ಇದ್ರ? ಎಂದು ಜಡ್ಜ್ ಕೇಳಿದಾಗ ಹೌದು ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಅವರು ಉತ್ತರಿಸಿದರು.ಬಂಧನಕ್ಕೆ ಕಾರಣ ಕೊಡಬೇಕು ಆದರೆ ಆ ಕಾರಣವನ್ನೇ ಕೊಟ್ಟಿಲ್ಲ ಎಂದು ದರ್ಶನ್ ಪರ ವಕೀಲ ಅಭಿಷೇಕ್ ಅವರು ಜಡ್ಜ್ ಅವರಿಗೆ ತಿಳಿಸಿದರು. ಈ ವೇಳೆ ಜೂನ್ 11 ರಂದು ಆರೋಪಿ ಬಂಧನಕ್ಕೆ ಸಿಕ್ಕ ಲೀಡ್ ಏನು? ಯಾವ ದಿನದಂದು ಪಂಚನಾಮೆ ಮಾಡಲಾಯಿತು? ವಿವರಣೆ ಕೊಡಿ ಎಂದು ಪೋಲೀಸರ ಪರ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು.ವಾದ ಪ್ರತಿವಾದ ಬಳಿಕ ವಿಚಾರಣೆ ನಡೆಸಿದ ನ್ಯಾ. ಜೆಬಿ ಪರ್ದಿವಾಲಾ ಹಾಗು ನ್ಯಾ. ಮಹದೇವನ್ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ಮೇ 14ಕ್ಕೆ ಮಂದೂಡಿ ಆದೇಶಿಸಿತು.

Share. Facebook Twitter LinkedIn WhatsApp Email

Related Posts

ಬ್ಯಾಂಡೇಜ್ ಇದೆ ಎಂದು ಮತದಾನಕ್ಕೆ ನಿರಾಕರಣೆ: ಮಗುವಿನೊಂದಿಗೆ 5 ಗಂಟೆ ಹಸಿದು ಕಾದು ಹಕ್ಕು ಗೆದ್ದ ಕೇರಳದ ಮಹಿಳೆ !

10/04/2026 9:07 PM1 Min Read

ಲೆಬನಾನ್ ರಕ್ತಪಾತಕ್ಕೆ ಭಾರತ ತೀವ್ರ ಕಳವಳ: ‘ಇದು ಅತ್ಯಂತ ಆತಂಕಕಾರಿ ಬೆಳವಣಿಗೆ’ ಎಂದ ಕೇಂದ್ರ ಸರ್ಕಾರ !

10/04/2026 8:52 PM1 Min Read

ಡಿಎ ನೀಡುವಲ್ಲಿ ತಾರತಮ್ಯ ಮಾಡುವಂತಿಲ್ಲ: ನೌಕರರು ಮತ್ತು ಪೆನ್ಷನರ್‌ಗಳಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್!

10/04/2026 8:42 PM1 Min Read
Recent News

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

10/04/2026 10:34 PM

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM

ಖರ್ಗೆ ಪ್ರಚೋದನಾಕಾರಿ ಭಾಷಣ: ಸಾಗರದಲ್ಲಿ ಬಿಜೆಪಿ ವತಿಯಿಂದ ಡಿವೈಎಸ್‌ಪಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಕೆ

10/04/2026 9:55 PM
State News
KARNATAKA

ಬೇಸಿಗೆಯ ಬಿಸಿಲಿಗೆ ತತ್ತರಿಸುವ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿ: ಸಚಿವ ಕೆ.ಜೆ. ಜಾರ್ಜ್ ಕರೆ

By kannadanewsnow0910/04/2026 10:34 PM KARNATAKA 1 Min Read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಬಿಸಿಲಿನ ಬೇಗೆಯಿಂದ ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳು ಕೂಡ…

ಸಾಗರ ತಾಲ್ಲೂಕು ಪಿಯುಸಿ ಫಲಿತಾಂಶ: ಸರ್ಕಾರಿ ಕಾಲೇಜು ಸೇರಿ ವಿವಿಧ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭರ್ಜರಿ ಸಾಧನೆ!

10/04/2026 10:22 PM

ಸಾಗರ ವಿಜ್ಞಾನ ವೇದಿಕೆಯಿಂದ ರಾಜ್ಯ ಮಟ್ಟದ ವಸತಿಸಹಿತ ವಿಜ್ಞಾನ ಬೇಸಿಗೆ ಶಿಬಿರ: ಏಪ್ರಿಲ್ 13ರಿಂದ ಚಾಲನೆ

10/04/2026 10:03 PM

ಖರ್ಗೆ ಪ್ರಚೋದನಾಕಾರಿ ಭಾಷಣ: ಸಾಗರದಲ್ಲಿ ಬಿಜೆಪಿ ವತಿಯಿಂದ ಡಿವೈಎಸ್‌ಪಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಕೆ

10/04/2026 9:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.