Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ‘PM ಸೂರ್ಯಘರ್’ ಯೋಜನೆಯಡಿ ಸಿಗಲಿದೆ ಉಚಿತ ‘ಸೌರವಿದ್ಯುತ್’ : ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ.!

10/06/2025 12:14 PM

ಇಂದೋರ್ ಕೊಲೆ ಪ್ರಕರಣ: ‘ಪತಿಯೊಂದಿಗೆ ಆತ್ಮೀಯತೆ ಹೊಂದುವುದು ಇಷ್ಟವಿಲ್ಲ’ : ಪ್ರಿಯಕರನಿಗೆ ಮೆಸೇಜ್ ಕಳುಹಿಸಿದ್ದ ಮಹಿಳೆ

10/06/2025 12:09 PM

BIG NEWS : ಭಾರತದಲ್ಲಿ ಹೊಸ ಕೊರೊನಾ ಅಲೆ : `XFG’ ರೂಪಾಂತರ ಎಷ್ಟು ಅಪಾಯಕಾರಿ ಗೊತ್ತಾ.? Covid XFG Variant

10/06/2025 12:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮತ್ತೆ ವಿವಾದದ ಸುಳಿಯಲ್ಲಿ ‘RGUHS’ : ಸೆನೆಟ್ ಚುನಾವಣಾ ಅಕ್ರಮ ಬಗ್ಗೆ CBI ತನಿಖೆಗೆ ಆಗ್ರಹಿಸಿ CRF ದೂರು!
KARNATAKA

BREAKING : ಮತ್ತೆ ವಿವಾದದ ಸುಳಿಯಲ್ಲಿ ‘RGUHS’ : ಸೆನೆಟ್ ಚುನಾವಣಾ ಅಕ್ರಮ ಬಗ್ಗೆ CBI ತನಿಖೆಗೆ ಆಗ್ರಹಿಸಿ CRF ದೂರು!

By kannadanewsnow0507/02/2025 7:39 AM

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಸೆನೆಟ್ ಚುನಾವಣೆ ಅಕ್ರಮ ಕುರಿತಂತೆ ಕೇಂದ್ರ ತನಿಖಾ ದಳ (CBI) ತನಿಖೆಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಆಗ್ರಹಿಸಿದೆ.ಅಲ್ಲದೇ ರಾಜ್ಯಪಾಲರು ಫಲಿತಾಂಶ ತಡೆಹಿಡಿದ ಬೆನ್ನಲ್ಲೇ, ಸಿಬಿಐ ತನಿಖೆಗೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ CRF ದೂರು ನೀಡಿದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಅಕ್ರಮಗಳ ಬೆನ್ನತ್ತಿರುವ ಸಿಟಿಜನ್ ಸಿಟಿಜನ್ ರೈಟ್ಸ್ ಫೌಂಡೇಷನ್, ಮೆಡಿಕಲ್ ಕಾಲೇಜುಗಳಲ್ಲಿನ ಅಕ್ರಮ ಪ್ರವೇಶ, ನರ್ಸಿಂಗ್ ಕಾಲೇಜುಗಳ ವಿಚಾರದಲ್ಲಿನ ಭ್ರಷ್ಟಾಚಾರಗಳ ವಿರುದ್ದ ಸರಣಿ ದಾವೆಗಳ ಮೂಲಕ ಕಾನೂನು ಸಮರವನ್ನು ಬಿರುಸುಗೊಳಿಸಿದೆ. ಇದೀಗ RGUHS ಸೆನೆಟ್ ಸದಸ್ಯರ ಚುನಾವಣೆ ಅಕ್ರಮ ವಿರುದ್ದ ಕಾನೂನು ಹೋರಾಟಕ್ಕಿಳಿದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು ಸಲ್ಲಿಸಿರುವ ದೂರು ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ.

ಸೆನೆಟ್ ಚುನಾವಣಾ ಅಕ್ರಮ ಆರೋಪವು ಕೋಲಾಹಲ ಸೃಷ್ಟಿಸಿದ್ದು, ರಾಜ್ಯಪಾಲರು ಫಲಿತಾಂಶವನ್ನು ತಡೆಹಿಡಿದ ಬೆನ್ನಲ್ಲೇ ಸಿಬಿಐ ತನಿಖೆಗೆ ಕೋರಿ CRF ಮುಖ್ಯಸ್ಥ ಕೆ.ಎ.ಪಾಲ್ ದೂರು ಸಲ್ಲಿಸಿದ್ದಾರೆ.10.12.2024 ರಂದು ನಡೆದ RGUHS ಸೆನೆಟ್ ಸದಸ್ಯರ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಚುನಾವಣೆಯಲ್ಲಿ ಹಲವಾರು ಅಭ್ಯರ್ಥಿಗಳು ಅರ್ಹ ಶಿಕ್ಷಣತಜ್ಞರು, “ಪ್ರಾಧ್ಯಾಪಕರಲ್ಲದ ಶಿಕ್ಷಕರು” ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಅರ್ಹ ವ್ಯಕ್ತಿಗಳ ಸ್ಪರ್ಧೆಗೆ ಹಿನ್ನಡೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸಾಂಸ್ಥಿಕ ಆಡಳಿತದಲ್ಲಿ ಸಾರ್ವಜನಿಕ ನಂಬಿಕೆ ಉಳಿಯಬೇಕಾದರೆ ತನಿಖೆಯನ್ನು CBIಗೆ ವಹಿಸುವುದು ಸೂಕ್ತ ಎಂದು ಕೆ.ಎ.ಪಾಲ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.

RGUHS ಕಾಯಿದೆಯ (ಇನ್ನು ಮುಂದೆ ‘ಶಾಸನ’ ಎಂದು ಉಲ್ಲೇಖಿಸಲಾಗುತ್ತದೆ) ಶಾಸನ 5.5 ರ ಉಲ್ಲಂಘನೆ ಆಗಿರುವುದು ಕಂಡುಬಂದಿದೆ. ಮತದಾರರ ಪಟ್ಟಿಯಲ್ಲಿನ ಗೊಂದಲಗಳು, ಹೆಸರುಗಳ ಅಕ್ರಮ ಸೇರ್ಪಡೆ ನಡೆದಿದೆ ಎನ್ನಲಾಗುತ್ತಿದ್ದು, ನಾಮಪತ್ರ ಸಲ್ಲಿಕೆ ಗಡುವು ಮುಕ್ತಾಯದ ನಂತರವೂ ಪೂರಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿರುವ ನಡೆ ಅನೇಕಾನೇಕ ಅನುಮಾನಗಳನ್ನು ಹುಟ್ಟುಹಾಕಿದೆ.

ಪೂರ್ಣಕಾಲಿಕ ಶಿಕ್ಷಕರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಹರು ಎಂದು ಷರತ್ತು ವಿಧಿಸಲಾಗಿದೆ. ಆದರೆ ಮಾನದಂಡಗಳನ್ನು ಪೂರೈಸದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿದೆ. ಸುಮಾರು 4,715 ಮಂದಿ ನರ್ಸಿಂಗ್ ವರ್ಗದ ಬೋಧಕರನ್ನು ಅರ್ಹ ಮತದಾರರು ಎಂದು ಪರಿಗಣಿಸಲಾಗಿದೆ. ಫಾರ್ಮಸಿ ಮತ್ತು ಯುನಾನಿ ವಿಭಾಗಗಳ ಬೋಧಕರನ್ನು ಹೊರಗಿಡಲಾಯಿತು. ಈ ಮೂಲಕ ನಿಸ್ಪಕ್ಷಪಾತ ಚುನಾವಣೆಗೆ ಅಪವಾದ ಎಂಬಂತೆ ಪ್ರಕ್ರಿಯೆ ನಡೆದಿದೆ ಎಂದು ಕೆ.ಎ.ಪಾಲ್ ದೂರಿದ್ದಾರೆ.ಅಧ್ಯಾಪಕರ ಸೋಗಿನಲ್ಲಿ ಮೋಸದ ಮತ ಚಲಾಯಿಸಿದ ನಿದರ್ಶನಗಳು ವರದಿಯಾಗಿವೆ. ಮತಕೇಂದ್ರದಲ್ಲಿ ಬೋಧನಾ ಸಿಬ್ಬಂದಿಯ ಸೋಗಿನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದು ಸಿಕ್ಕಿಬಿದ್ದ ಸನ್ನಿವೇಶವೇ ಇದಕ್ಕೆ ಉದಾಹರಣೆಯಾಗಿದೆ.

ಮತದಾರರ ಗುರುತಿನ ಚೀಟಿಗಳನ್ನುಅಸುರಕ್ಷಿತ ಪಿಡಿಎಫ್ ಸ್ವರೂಪಗಳಲ್ಲಿ ನೀಡುವುದರಿಂದ ಚುನಾವಣಾ ಪ್ರಕ್ರಿಯೆ ಹಳಿತಪ್ಪಿದೆ. ಇದು ನಕಲಿ ಮತದಾನಕ್ಕೆ ಅನುಕೂಲ ಕಲ್ಪಿಸಿದ್ದು, ಚುನಾವಣಾ ಅಧಿಕಾರಿಗಳೂ ಕರ್ತವ್ಯವನ್ನು ಪರಿಪೂರ್ಣಗೊಳಿಸುವಲ್ಲಿ ವಿಫಲಾರಾಗಿದ್ದಾರೆ. ಮತದಾರರ ಗುರುತಿನ ಚೀಟಿಗೆ ಬದಲಾಗಿ ನಕಲಿ ಆಧಾರ್ ಕಾರ್ಡ್‌ಗಳ ಬಳಕೆಯಾಗಿದ್ದು, ಅನಧಿಕೃತ ವ್ಯಕ್ತಿಗಳು ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು. ಈ ಮೂಲಕ ಶಾಸನಬದ್ಧ ಆದೇಶಗಳನ್ನು ಜಾರಿಗೊಳಿಸುವಲ್ಲಿ ಆಗಿರುವ ವೈಫಲ್ಯವು ಚುನಾವಣಾ ಫಲಿತಾಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಿಆರ್‌ಎಫ್ ತನ್ನ ದೂರಿನಲ್ಲಿ ಬೆಳಕುಚೆಲ್ಲಿದೆ.

ಈ ವ್ಯಾಪಕ ಅಕ್ರಮಗಳ ಕುರಿತಂತೆ ಬಾಧಿತ ಅಭ್ಯರ್ಥಿಗಳ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು, ಚುನಾವಣಾ ಚುನಾವಣಾ ಫಲಿತಾಂಶಗಳನ್ನು ತಡೆಹಿಡಿಯುವಂತೆ RGUHS ಗೆ ನಿರ್ದೇಶಿಸಿದ್ದಾರೆ. (ಇದನ್ನು ವಿಶ್ವವಿದ್ಯಾಲಯವು ದಿನಾಂಕ 03.01.2025 ರ ಅಧಿಸೂಚನೆಯಲ್ಲಿ ತಿಳಿಸಿದೆ). ಈ ಚುನಾವಣಾ ಅಕ್ರಮವು ಶಾಸನಬದ್ದ ನಿಯಮಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆದಲ್ಲಿ ಮಾತ್ರ ಸತ್ಯಾಂಶ ಹೊರಬೀಳಲಿದೆ ಎಂದು ಸಿಆರ್‌ಎಫ್ ಅಧ್ಯಕ್ಷ ಕೆ.ಎ.ಪಾಲ್ ಅವರು ದೂರಿನಲ್ಲಿ ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

GOOD NEWS : ‘PM ಸೂರ್ಯಘರ್’ ಯೋಜನೆಯಡಿ ಸಿಗಲಿದೆ ಉಚಿತ ‘ಸೌರವಿದ್ಯುತ್’ : ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ.!

10/06/2025 12:14 PM2 Mins Read

BIG NEWS : ಸಾರ್ವಜನಿಕರೇ ಮುಖ್ಯ ಮಾಹಿತಿ : ನಿಮ್ಮ ಬಳಿ 10 ವರ್ಷದ ಹಳೆಯ ‘ಆಧಾರ್ ಕಾರ್ಡ್’ ಇದ್ರೆ ಜೂನ್ 14ರೊಳಗೆ ತಪ್ಪದೇ ಈ ಕೆಲಸ ಮಾಡಿ.!

10/06/2025 11:58 AM2 Mins Read

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : ತನಿಖೆಯ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ.!

10/06/2025 11:35 AM1 Min Read
Recent News

GOOD NEWS : ‘PM ಸೂರ್ಯಘರ್’ ಯೋಜನೆಯಡಿ ಸಿಗಲಿದೆ ಉಚಿತ ‘ಸೌರವಿದ್ಯುತ್’ : ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ.!

10/06/2025 12:14 PM

ಇಂದೋರ್ ಕೊಲೆ ಪ್ರಕರಣ: ‘ಪತಿಯೊಂದಿಗೆ ಆತ್ಮೀಯತೆ ಹೊಂದುವುದು ಇಷ್ಟವಿಲ್ಲ’ : ಪ್ರಿಯಕರನಿಗೆ ಮೆಸೇಜ್ ಕಳುಹಿಸಿದ್ದ ಮಹಿಳೆ

10/06/2025 12:09 PM

BIG NEWS : ಭಾರತದಲ್ಲಿ ಹೊಸ ಕೊರೊನಾ ಅಲೆ : `XFG’ ರೂಪಾಂತರ ಎಷ್ಟು ಅಪಾಯಕಾರಿ ಗೊತ್ತಾ.? Covid XFG Variant

10/06/2025 12:02 PM

BIG NEWS : ಸಾರ್ವಜನಿಕರೇ ಮುಖ್ಯ ಮಾಹಿತಿ : ನಿಮ್ಮ ಬಳಿ 10 ವರ್ಷದ ಹಳೆಯ ‘ಆಧಾರ್ ಕಾರ್ಡ್’ ಇದ್ರೆ ಜೂನ್ 14ರೊಳಗೆ ತಪ್ಪದೇ ಈ ಕೆಲಸ ಮಾಡಿ.!

10/06/2025 11:58 AM
State News
KARNATAKA

GOOD NEWS : ‘PM ಸೂರ್ಯಘರ್’ ಯೋಜನೆಯಡಿ ಸಿಗಲಿದೆ ಉಚಿತ ‘ಸೌರವಿದ್ಯುತ್’ : ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ.!

By kannadanewsnow5710/06/2025 12:14 PM KARNATAKA 2 Mins Read

ನವದೆಹಲಿ : ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯನ್ನು…

BIG NEWS : ಸಾರ್ವಜನಿಕರೇ ಮುಖ್ಯ ಮಾಹಿತಿ : ನಿಮ್ಮ ಬಳಿ 10 ವರ್ಷದ ಹಳೆಯ ‘ಆಧಾರ್ ಕಾರ್ಡ್’ ಇದ್ರೆ ಜೂನ್ 14ರೊಳಗೆ ತಪ್ಪದೇ ಈ ಕೆಲಸ ಮಾಡಿ.!

10/06/2025 11:58 AM

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : ತನಿಖೆಯ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ.!

10/06/2025 11:35 AM

BREAKING : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 2025-26ನೇ ಸಾಲಿನ `ಶೂ-ಸಾಕ್ಸ್’ ವಿತರಣೆಗೆ ಮಹತ್ವದ ಆದೇಶ.!

10/06/2025 11:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.