ಮೈಸೂರು : ಪಹಲ್ಗಾಮ್ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಉಗ್ರರ ನೆಲೆಗಳನ್ನು ನಾಶ ಮಾಡಿದೆ. ಇದೀಗ ಈ ಒಂದು ಆಪರೇಷನ್ ಸಿಂಧೂರ ಕುರಿತು ಬಹುಭಾಷಾ ನಟ ಕಿಶೋರ್ ಅವರು ಪ್ರತಿಕ್ರಿಯೆ ನೀಡಿದು ಆಪರೇಷನ್ ಎಂದು ದೇಶದ ಹೊರಗೆ ನಡೆದಿದ್ದಕ್ಕಿಂತ ದೇಶದ ಒಳಗಡೆ ನಡೆದಿದೆ. ಪ್ರಧಾನಿಗಳು ಆರ್ಮಿ ಜೆರಸಿ ಹಾಕಿಕೊಂಡು ರಾಜಕೀಯ ಲಾಭ ಪಡೆದುಕೊಂಡರು. ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಲಾಭ ಪಡೆದುಕೊಂಡಿದ್ದಾರೆ ಎಂದು ಮೈಸೂರು ನಗರದಲ್ಲಿ ಬಹುಭಾಷ ನಟ ಕಿಶೋರ್ ಹೇಳಿಕೆ ನೀಡಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ವೀಕ್ ಆಗುತ್ತಿದೆ. ಜಾತಿ, ಧರ್ಮ, ಭಾಷೆಯ ಬಗ್ಗೆ ಅಂಧಾಭಿಮಾನ ಎಲ್ಲಿಯ ತನಕ ಇರಲಿದೆಯೋ, ಅಲ್ಲಿಯವರೆಗೂ ಬಳಸಿಕೊಳ್ಳುವವರು ಕೂಡ ಇರುತ್ತಾರೆ. ಪಹಲ್ಗಾಂನಲ್ಲಿ ನಡೆದ ಘಟನೆಯ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ರಾಜಕೀಯ ಲಾಭಕ್ಕಾಗಿ ನಾವು ಬಿಟ್ಟುಕೊಡಬಾರದು ಎಂದರು.
ಈ ಹಿಂದಿನ ಘಟನೆಗಳ ಸತ್ಯಾಸತ್ಯತೆಗಳು ಇನ್ನೂ ಹೊರ ಬಂದಿಲ್ಲ. ಅಲ್ಲಿನ ಗವರ್ನರ್ ಸತ್ಯಪಾಲ್ ಆರೋಪಗಳ ಬಗ್ಗೆ ಚರ್ಚೆಯಾಗಬೇಕು. ಆರೋಪಗಳ ಬಗ್ಗೆ ತನಿಖೆಯಾಗಿಲ್ಲ. ಧ್ವನಿ ಎತ್ತಿದರೂ ಅದನ್ನು ಅಡಗಿಸುತ್ತಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ದೇಶದ ಹೊರಗೆ ನಡೆದಿದ್ದಕ್ಕಿಂತ ದೇಶದೊಳಗೆ ನಡೆದಿದೆ. ನಾವು ಜಾತಿ ಧರ್ಮದಲ್ಲಿ ಅಂಧರಾಗಿ ಕುಳಿತಿದ್ದೇವೆ. ಜನರು ಪ್ರಶ್ನೆಗಳನ್ನು ಕೇಳಬೇಕು ಉತ್ತರ ಕೊಡುವವರೆಗೂ ಬಿಡಬಾರದು. ಪ್ರಧಾನಿಗಳು ಆರ್ಮಿ ಜೆರಸಿ ಹಾಕಿಕೊಂಡು ರಾಜಕೀಯ ಲಾಭ ಪಡೆದುಕೊಂಡರು. ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಲಾಭ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.