ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಏಳರಂದು ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡಿದ್ದು ಈ ಒಂದು ದಾಳಿಯಲ್ಲಿ ಭಾರತೀಯ ಸೇನೆ ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಹತ್ಯೆಗೈದಿದೆ ಎಂದು ತಿಳಿದುಬಂದಿದೆ.
ಹೌದು ಆಪರೇಷನ್ ಸಿಂಧೂರನಲ್ಲಿ ಹತ್ಯೆಯಾದಂತಹ ಉಗ್ರರ ಹೆಸರು ಇದೀಗ ಬಹಿರಂಗವಾಗಿದೆ. ಲಷ್ಕರ್-ಎ-ತೈಬಾದ ಮರ್ಕಜ್ ಇನ್ ಚಾರ್ಜ್ ಮುದಸೀರ್, ಜೈಶ್ ಎ ಮೊಹಮ್ಮದ್ ಉಗ್ರ ಹಫೀಜ್ ಮೊಹಮ್ಮದ್ ಜಮೀಲ್, ಬಹಾವಲ್ಪುರ್ ಮರ್ಕಜ್ ಸುಭಾನಲ್ಲಾದ ಇನ್ಚಾರ್ಜ್ ಆಗಿದಂತಹ ಜಮೀಲ್, ಜೈಶ್ ಎ ಮೊಹಮ್ಮದ್ ಉಗ್ರ ಮೊಹಮ್ಮದ್ ಯುಸುಫ್ ಕೂಡ ಹತ್ಯೆಯಾಗಿದ್ದಾನೆ.
ಲಷ್ಕರ್-ಎ-ತೈಬಾ ಸಂಘಟನೆಯ ಉಗ್ರ ಖಾಲಿದ್ ಸಹ ಹತ್ಯೆಯಾಗಿದ್ದಾನೆ. ಮೇ ಏಳರಂದು ಭಾರತ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಈ ಐದು ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆಯಾಗಿದೆ. ಇನ್ನು ಮುಧಾಸೀರ್ ಖಾದಿಯಾನ್ ಖಾಸ್ ಅಲಿಯಾಸ್ ಅಬು ಜಿಂದಾಲ್, ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಮೊಹಮ್ಮದ್ ಸಲೀಂ, ಅಬು ಆಕಾಶಾ ಅಲಿಯಾಸ್ ಖಾಲಿದ್ ಆಫೀಸ್, ಮೊಹಮ್ಮದ್ ಜಮೀಲ್ ಹಾಗು ಉಗ್ರ ಮೊಹಮ್ಮದ್ ಹಸನ್ ಖಾನ್ ನನ್ನು ಭಾರತೀಯ ಸೇನೆ ಇದೀಗ ಹತ್ಯೆ ಮಾಡಿದೆ.