ನವದೆಹಲಿ : ಜನವರಿ 5 ರಂದು ಜಾರಿ ನಿರ್ದೇಶನಾಲಯದ ತಂಡದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಶುಕ್ರವಾರ ಪಶ್ಚಿಮ ಬಂಗಾಳದ ಸಂದೇಶ್ಕಾಲಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದೆ. ಪ್ರಸ್ತುತ ಜೈಲಿನಲ್ಲಿರುವ ಅಮಾನತುಗೊಂಡ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್ ಅವರ ಮನೆಯ ಮೇಲೆ ದಾಳಿ ನಡೆಸಲು ತೆರಳುತ್ತಿದ್ದಾಗ ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ.
ಸಂದೇಶ್ಖಾಲಿಯ ಸರ್ಬೆರಿಯಾ ಪ್ರದೇಶದಲ್ಲಿರುವ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಹಫೀಜುಲ್ ಖಾನ್ ಅವರ ಸಂಬಂಧಿಗೆ ಸೇರಿದ ಮನೆಯ ಮೇಲೆ 10 ಸದಸ್ಯರ ಸಿಬಿಐ ತಂಡ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಭದ್ರತಾ ಪಡೆಗಳ ನೆರವಿನೊಂದಿಗೆ ಸಿಬಿಐ ತಂಡವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನ ಮತ್ತು ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಹಲವಾರು ಬಾಂಬ್ಗಳನ್ನ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಬಾಂಬ್ಗಳನ್ನು ವಶಪಡಿಸಿಕೊಂಡ ನಂತರ ರಾಷ್ಟ್ರೀಯ ಭದ್ರತಾ ಪಡೆಯ ಬಾಂಬ್ ಸ್ಕ್ವಾಡ್ಗಳು ಸಂದೇಶ್ಖಾಲಿಯ ಸ್ಥಳಕ್ಕೆ ತಲುಪಿದವು.
BREAKING : ಧರ್ಮದ ಆಧಾರದ ಮೇಲೆ ಮತ ಯಾಚನೆ ; ಸಂಸದ ‘ತೇಜಸ್ವಿ ಸೂರ್ಯ’ ವಿರುದ್ಧ ಪ್ರಕರಣ ದಾಖಲು
ಮತದಾನಕ್ಕೆ ಕೆಲವೇ ಗಂಟೆ ಬಾಕಿ: 5 ಗಂಟೆವರೆಗೆ ರಾಜ್ಯದ ’14 ಲೋಕಸಭಾ ಕ್ಷೇತ್ರ’ದಲ್ಲಿ ಶೇ.63.90ರಷ್ಟು ಮತದಾನ








