ಹೈದ್ರಾಬಾದ್ : ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದ ಟಿ. ರಾಜಾ ಸಿಂಗ್ʼನನ್ನ ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಿದೆ. ಇನ್ನು ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 10 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಈ ಹಿಂದೆ ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಹೈದರಾಬಾದ್ನಲ್ಲಿ ರಾಜಾರನ್ನ ಪೊಲೀಸರು ಬಂಧಿಸಿದ್ದರು.
BJP suspends party's MLA in Telangana, T Raja Singh; asks him to show cause within 10 days as to why should he not be expelled from the party.
Earlier today, he was booked for his alleged derogatory comments against Prophet Muhammad.
(File photo) pic.twitter.com/WdWXXSdyML
— ANI (@ANI) August 23, 2022
ಬಿಜೆಪಿ ನಾಯಕನ ಬಂಧನಕ್ಕೆ ಒತ್ತಾಯಿಸಿ, ಸೋಮವಾರ ರಾತ್ರಿ ಹೈದರಾಬಾದ್ನ ಹಲವು ಭಾಗಗಳಲ್ಲಿ ಹಲವಾರು ಸಮುದಾಯದವರು ಪ್ರತಿಭಟನೆ ನಡೆಸಿದರು. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮೂಲಗಳು, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ ಹಲವಾರು ಪಕ್ಷದ ಶಾಸಕರು ಮತ್ತು ಕೌನ್ಸಿಲರ್ಗಳು ಪೊಲೀಸ್ ಠಾಣೆಗಳನ್ನು ತಲುಪಿ, ಅಲ್ಲಿ ಪ್ರತಿಭಟನೆ ನಡೆಸಿದರು ಮತ್ತು ರಾಜಾ ಸಿಂಗ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.