ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚೆಗೆ ಟಿಆರ್ಎಸ್ ಶಾಸಕರ ಖರೀದಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರಿಗೆ ಎಸ್ಐಟಿ ನೋಟಿಸ್ ನೀಡಿತ್ತು. ಈ ನೋಟಿಸ್’ಗಳನ್ನು ರದ್ದುಗೊಳಿಸುವಂತೆ ಕೋರಿ ಬಿ.ಎಲ್.ಸಂತೋಷ್ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿ ಸಂತೋಷ್’ಗೆ ರಿಲೀಫ್ ನೀಡಿದೆ. ಎಸ್ಐಟಿ ನೋಟಿಸ್’ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸಧ್ಯಕ್ಕೆ ಪ್ರಶ್ನಿಸುವಂತಿಲ್ಲ ಎಂದಿದೆ. ಇನ್ನು ನ್ಯಾಯಾಲಯವು ವಿಚಾರಣೆಯನ್ನ ಮೇ 5ಕ್ಕೆ ಮುಂದೂಡಿದೆ.
ರಾಜ್ಯದ ಗಡಿ ಹಾಗೂ ಜನರನ್ನು ರಕ್ಷಿಸಲು ಶಕ್ತಿ ಮೀರಿ ಹೋರಾಟ – ಸಿಎಂ ಬಸವರಾಜ ಬೊಮ್ಮಾಯಿ
“ಯಾವುದೇ ವ್ಯಕ್ತಿ ಅಥವಾ ಸಂಬಂಧವು ರಾಷ್ಟ್ರಕ್ಕಿಂತ ಮೇಲಲ್ಲ”: ಪ್ರಧಾನಿ ಮೋದಿ