ಕಾಶ್ಮೀರ : ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನದಂದು ನಡೆದ ಎರಡು ಪ್ರತ್ಯೇಕ ಗ್ರೆನೇಡ್ ದಾಳಿಗಳಲ್ಲಿ ಒರ್ವ ಪೊಲೀಸ್ ಅಧಿಕಾರಿ ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೊದಲ ಘಟನೆಯಲ್ಲಿ, ಬುದ್ಗಾಮ್ ಜಿಲ್ಲೆಯ ಚಡೂರಾ ಪ್ರದೇಶದಲ್ಲಿ ಭಯೋತ್ಪಾದಕರು ಗ್ರೆನೇಡ್ ಎಸೆದು ಒಬ್ಬ ನಾಗರಿಕನನ್ನ ಗಾಯಗೊಳಿಸಿದ್ದಾರೆ. ಇನ್ನು ಈ ಗಾಯಗೊಂಡ ನಾಗರಿಕನನ್ನ ಕರಣ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಮತ್ತೊಂದು ದಾಳಿಯಲ್ಲಿ, ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಬಳಿ ಗ್ರೆನೇಡ್ʼಗಳನ್ನು ಎಸೆಯಲಾಗಿದೆ. ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾನೆ.
ಅಂದ್ಹಾಗೆ, ಕಾಶ್ಮೀರದಲ್ಲಿ ಕಳೆದ ಮೂರು ದಿನಗಳಲ್ಲಿ ಸರಣಿ ದಾಳಿಗಳು ನಡೆಯುತ್ತಿದ್ದು, ನಿನ್ನೆ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.
Civilian injured in a terrorist attack in Kashmir's Budgam
Read @ANI Story |https://t.co/4hYhfjCG6H#Kashmir #Budgam #TerroristAttacks #grenade pic.twitter.com/CpCwz7bWs3
— ANI Digital (@ani_digital) August 15, 2022