ನವದೆಹಲಿ : ಭಾರತ ಜಾತ್ಯಾತೀತ ದೇಶವಾಗಿದ್ದು, ಪ್ರತಿಯೊಬ್ಬರೂ ತಮ್ಮ ಧರ್ಮವನ್ನ ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಂತಹ ಅರ್ಜಿಯನ್ನ ಸಲ್ಲಿಸುವ ಮೊದಲು ಭವಿಷ್ಯದಲ್ಲಿ ಜನರು ಯೋಚಿಸುತ್ತಾರೆ ಎಂದು ಹೇಳಿದ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿದೆ.

ಈ ಅರ್ಜಿಯು “ಪ್ರಚಾರ ಹಿತಾಸಕ್ತಿ ದಾವೆ” ಎಂದು ಉಲ್ಲೇಖಿಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಅರ್ಜಿದಾರ ಉಪೇಂದ್ರ ನಾಥ್ ದಲೈ ಅವರನ್ನ “ನೀವು ಬೇಕಾದ್ರೆ ಅವರನ್ನ ಪರಮಾತ್ಮ ಎಂದು ಪರಿಗಣಿಸಬಹುದು. ಅದನ್ನ ಇತರರ ಮೇಲೆ ಏಕೆ ಹೇರಬೇಕು?” ಎಂದು ಪ್ರಶ್ನಿಸಿದೆ.

“ಭಾರತದಲ್ಲಿ, ಪ್ರತಿಯೊಬ್ಬರೂ ತಮ್ಮ ಧರ್ಮವನ್ನ ಅನುಸರಿಸುವ ಸಂಪೂರ್ಣ ಹಕ್ಕನ್ನ ಹೊಂದಿದ್ದಾರೆ. ಪ್ರತಿಯೊಬ್ಬರೂ ಒಂದೇ ಧರ್ಮವನ್ನ ಅನುಸರಿಸಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.

“ಅರ್ಜಿಯನ್ನ ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ, ಇದು ಇಂದಿನಿಂದ ನಾಲ್ಕು ವಾರಗಳಲ್ಲಿ ಈ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಲು ₹ 1 ಲಕ್ಷ ಅನುಕರಣೀಯ ವೆಚ್ಚದೊಂದಿಗೆ ವಜಾ ಮಾಡಲು ಅರ್ಹವಾಗಿದೆ” ಎಂದು ಅದು ಹೇಳಿದೆ. ಇನ್ನು ಈ ದಂಡವು ಅಂತಹ ಪಿಐಎಲ್ಗಳನ್ನು ಸಲ್ಲಿಸುವ ಮೊದಲು ಜನರು ಕನಿಷ್ಠ ನಾಲ್ಕು ಬಾರಿ ಯೋಚಿಸುವಂತೆ ಮಾಡುತ್ತದೆ ಎಂದು ನ್ಯಾಯಮೂರ್ತಿ ಶಾ ಹೇಳಿದ್ದಾರೆ.

ಪಿಐಎಲ್ ತಳ್ಳಿಹಾಕಿದ ನ್ಯಾಯಮೂರ್ತಿ ಶಾ, “ಎಲ್ಲರೂ ನಿಮ್ಮ ಗುರೂಜಿಯನ್ನು ಒಪ್ಪಿಕೊಳ್ಳಬೇಕು ಎಂದು ನೀವು ಹೇಳುತ್ತಿದ್ದೀರಿ. ಅದು ಹೇಗೆ ಸಾಧ್ಯ. ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನ ಅನುಸರಿಸುವ ಹಕ್ಕಿದೆ” ಎಂದರು.

 

ಉದ್ಯೋಗ ನಿರೀಕ್ಷಿತರಿಗೆ ಭರ್ಜರಿ ನ್ಯೂಸ್ ; ಕೇಂದ್ರೀಯ ವಿದ್ಯಾಲಯದಲ್ಲಿ 13,000 ಬೋಧಕ & ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

BIGG BREAKING NEWS : SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ‌ಪ್ರಕಟ | Karnataka SSLC ExamTime Table

ಎಚ್ಚರ ; ಹೆಚ್ಚುತ್ತಿದೆ ‘ನಕಲಿ ಹಿಟ್ಟು’ ಮಾರಾಟ, ಚಪಾತಿ ಮಾಡೋ ಮುನ್ನ ಈ ರೀತಿ ಗುರುತಿಸಿ, ಇಲ್ಲದಿದ್ರೆ ಆರೋಗ್ಯಕ್ಕೆ ದೊಡ್ಡ ಪೆಟ್ಟು

Share.
Exit mobile version