ನವದೆಹಲಿ : ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಮೇಲೆ ಮತ ಚಲಾಯಿಸುವ ಮೂಲಕ ಸೋಮವಾರ ತನ್ನ ಬಹುಮತವನ್ನು ಸಾಬೀತುಪಡಿಸಿದೆ. ಬಿಜೆಪಿ ತನ್ನ ಸರ್ಕಾರವನ್ನ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಕಳೆದ ವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯನ್ನ ಮಂಡಿಸಿದ್ದರು. ವಿಧಾನಸಭಾ ಅಧಿವೇಶನದ ಮೊದಲ ದಿನ ಮನ್ ವಿಶ್ವಾಸಮತ ಯಾಚನೆಯನ್ನ ಮಂಡಿಸಿದರು ಮತ್ತು ‘ಆಪರೇಷನ್ ಕಮಲ’ಕ್ಕಾಗಿ ಬಿಜೆಪಿಯನ್ನು ಟೀಕಿಸಿದರು. ಕೇಸರಿ ಪಕ್ಷದೊಂದಿಗೆ ಕಾಂಗ್ರೆಸ್ ಕೈ ಜೋಡಿಸಿ ಕೆಲಸ ಮಾಡುತ್ತಿದೆ ಎಂದು ಅವ್ರು ಆರೋಪಿಸಿದರು.
Bhagwant Mann govt wins confidence vote in Punjab Assembly; Congress members walk out
— Press Trust of India (@PTI_News) October 3, 2022
ಆಪರೇಷನ್ ಕಮಲದ ಭಾಗವಾಗಿ ಆರು ತಿಂಗಳ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ತನ್ನ ಕನಿಷ್ಠ ಹತ್ತು ಶಾಸಕರನ್ನು ತಲಾ 25 ಕೋಟಿ ರೂ.ಗಳ ಆಮಿಷವೊಡ್ಡಿದೆ ಎಂದು ಎಎಪಿ ಇತ್ತೀಚೆಗೆ ಹೇಳಿಕೊಂಡಿದೆ.