ಹಾವೇರಿ : ರಾಜ್ಯದಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಹಾವೇರಿಯಲ್ಲಿ ಧಾರಕಾರ ಮಳೆಗೆ ಮಠ ನಡುಗಡೆಯಂತಾಗಿದ್ದು, ಪಂಡರಾಪುರಕ್ಕೆ ಹೊರಟಿದ್ದ ಭಕ್ತರು ಸಿಲುಕಿದ್ದಾರೆ.
ಪಂಡರಾಪುರಕ್ಕೆ ಹೋಗುತ್ತಿದ್ದ ಯಲ್ಲಾಪುರ ಗ್ರಾಮದ 30 ಕ್ಕೂ ಹೆಚ್ಚು ಭಕ್ತರು ಹಾವೇರಿಯ ಬರದೂರು ಗ್ರಾಮದ ಹೊರವಲಯದಲ್ಲಿರುವ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಭಾರೀ ಮಳೆಯಿಂದಾಗಿ ಮಠ ನಡುಗಡ್ಡೆಯಂತಾಗಿದ್ದು, ಆತಂಕ ಶುರುವಾಗಿದೆ.
ನೀರಿನ ನಡುವೆ ಸಿಲುಕಿರುವ 30 ಕ್ಕೂ ಹೆಚ್ಚು ಭಕ್ತರ ರಕ್ಷಣೆಗೆ ಕಾರ್ಯಾಚರಣೆ ಶುರುವಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.