ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಾಂಗ್ಲಾದೇಶದ ನವೋಗಾಂವ್ ಜಿಲ್ಲೆಯ ನದಿಯೊಂದರಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನ ಮೃತದೇಹ ಶನಿವಾರ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ, ಶನಿವಾರ ಮಧ್ಯಾಹ್ನ ನವೋಗಾಂವ್ ಪಟ್ಟಣದ ಕಾಲಿತಾಲಾ ಸ್ಮಶಾನದ ಬಳಿಯ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಆರಂಭದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ವರದಿಯ ಪ್ರಕಾರ ಮೃತದೇಹವನ್ನ ನಂತರ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ನಿರ್ವಹಣಾ ವಿಭಾಗದ ವಿದ್ಯಾರ್ಥಿ ಅಭಿ ಎಂದು ಗುರುತಿಸಲಾಗಿದೆ. ಆತ ತನ್ನ ಆನರ್ಸ್ ಕೋರ್ಸ್’ನ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದ.
ಅಭಿ ಬೊಗುರಾ ಜಿಲ್ಲೆಯ ಆದಮ್ದಿಘಿ ಉಪಜಿಲ್ಲಾದ ಸಂತಹಾರ್ ನಿವಾಸಿ ರಮೇಶ್ ಚಂದ್ರ ಅವರ ಮಗ. ಜನವರಿ 11ರಂದು ಜಗಳವಾಡಿ ಮನೆಯಿಂದ ಹೊರಗೆ ಹೋದ ನಂತರ ನಾಪತ್ತೆಯಾಗಿದ್ದಾನೆ ಎಂದು ಅವರ ಕುಟುಂಬ ತಿಳಿಸಿದೆ.
ಶವ ಪತ್ತೆಯಾದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಡಿತು, ಕಳೆದ ಏಳು ದಿನಗಳಿಂದ ಅವರನ್ನ ಹುಡುಕುತ್ತಿದ್ದ ಅಭಿ ಅವರ ಕುಟುಂಬವು ನದಿಯ ದಡಕ್ಕೆ ಧಾವಿಸಿತು. ಅವರು ಮನೆಯಿಂದ ಹೊರಡುವಾಗ ಧರಿಸಿದ್ದ ಬಟ್ಟೆಗಳ ಆಧಾರದ ಮೇಲೆ ಕುಟುಂಬ ಸದಸ್ಯರು ಶವವನ್ನ ಗುರುತಿಸಿದ್ದಾರೆ ಎಂದು ವರದಿ ತಿಳಿಸಿದೆ.
ವಾಟ್ಸಾಪ್’ನಲ್ಲಿ ‘ಆಧಾರ್ ಕಾರ್ಡ್’ ಡೌನ್ಲೋಡ್ ಮಾಡುವುದು ಹೇಗೆ ಗೊತ್ತಾ.? ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ!
ವಿದ್ಯಾರ್ಥಿಗಳೇ ಗಮನಿಸಿ ; ನಾಳೆಯಿಂದ ‘ಜೆಇಇ ಮುಖ್ಯ ಪರೀಕ್ಷೆ’ ಆರಂಭ, ಈ ನಿಯಮಗಳ ಪಾಲನೆ ಕಡ್ಡಾಯ!
ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ. 75ರಷ್ಟು ಇಳಿಕೆ ; ಶಾಕಿಂಗ್ ಅಂಕಿ-ಅಂಶ ಬಹಿರಂಗ!








