ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದ ಅಗ್ನಿ ದುರಂತ ಸಂಭವಿಸಿದ್ದು, ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಹೊರವಲಯದಲ್ಲಿರುವ ವಾಸವದತ್ತ ಸಿಮೆಂಟ್ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದ ಜಮಿನೀನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಅತ್ಯಧಿಕ ಪ್ರಮಾಣದಲ್ಲಿ ಸಂಗ್ರಹಿ ಇಟ್ಟಿದ ಕಸಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಶನಿವಾರ ರಾತ್ರಿ 7ಗಂಟೆಗೆ ಅಲ್ಟ್ರಾಟೆಕ್ (ವಾಸವದತ್ತಾ) ಸಿಮೆಂಟ್ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು, ಕೂಡಲೇ ಕಂಪನಿಯ ಅಗ್ನಿ ಶಾಮಕ ದಳದ 2 ವಾಹನ ಮತ್ತು ಮಳಖೇಡ ಅಲ್ಟ್ರಾಟೇಕ್ ಸಿಮೆಂಟ್ ಕಾರ್ಖಾನೆಯ 1 ವಾಹನ ಹಾಗೂ ಅಗ್ನಿ ಶಾಮಕ ದಳದ 1 ವಾಹನ ಬೆಂಕಿ ನಂದಿಸಲು ತೆರಳಿದ್ದಾಗ ಎಲ್ಲಾ ಕಡೆ ಬೆಂಕಿ ವಿಸ್ತರಣೆಗೊಂಡಿತು.
ಅಗ್ನಿ ಶಾಮಕ ದಳದ 4 ವಾಹನಗಳು ಹಾಗೂ ಕಾರ್ಖಾನೆ ಸಿಬ್ಬಂದಿಗಳು ಸೇರಿ ಶನಿವಾರ ರಾತ್ರಿ 7 ಗಂಟೆಯಿಂದ ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ಟರೂ ಇಲ್ಲಿಯವರೆಗೆ ಸಂಪೂರ್ಣ ಬೆಂಕಿ ನಂದಿಸಲುಎಷ್ಟೇ ಪ್ರಯತ್ನ ಪಟ್ಟರೂ ಇಲ್ಲಿಯವರೆಗೆ ಸಂಪೂರ್ಣ ಬೆಂಕಿ ನಂದಿಸಲು ಆಗಲಿಲ್ಲ, ಪವರ್ ಪ್ಲಾಟ್ ನಿಂದ ನೀರಿನ ಪೈಪ್ ಲೈನ್ ಮೂಲಕ ನೀರನ್ನು ಬಳಸಿ ಸಂಪೂರ್ಣ ಬೆಂಕಿ ನಂದಿಸಲು ಆಗಲಿಲ್ಲ ಎಂದು ತಿಳಿದುಬಂದಿದೆ.