ಕಿನ್ನೌರ್ : ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಪೋಟದ ಬೆನ್ನಲ್ಲೇ ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಮೇಘಸ್ಫೋಟ ಸಂಭವಿಸಿದ್ದು,ಹಲವು ಯಾತ್ರಾರ್ಥಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ, ಕಿನ್ನೌರ್ ಕೈಲಾಸ ಯಾತ್ರೆ ಮಾರ್ಗದ ಹಲವಾರು ವಿಭಾಗಗಳು ಹಾನಿಗೊಳಗಾಗಿವೆ ಎಂದು ವರದಿ ತಿಳಿಸಿದೆ. ಆಗಸ್ಟ್ 6 ರಿಂದ ಇಂದಿನಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ನೀರು ಇಳಿಜಾರಿನಲ್ಲಿ ಹರಿಯುತ್ತಿರುವ ಮತ್ತು ಬಂಡೆಗಳನ್ನು ಭೇದಿಸುತ್ತಿರುವ ಭಯಾನಕ ದೃಶ್ಯಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡವು.
ಕಿನ್ನೌರ್-ಕೈಲಾಸ ಯಾತ್ರೆ ಮಾರ್ಗದಲ್ಲಿ ಹಲವಾರು ಯಾತ್ರಿಕರು ಸಿಲುಕಿಕೊಂಡಿದ್ದರು. ಸಿಕ್ಕಿಬಿದ್ದ ಯಾತ್ರಾರ್ಥಿಗಳನ್ನು ಪೂರ್ವಾನಿ ಮಾರ್ಗದ ಮೂಲಕ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದಾಗಿ ತಂಗ್ಲಿಪ್ಪಿ ಮತ್ತು ಕಾಂಗ್ರಾಂಗ್ ಹೊಳೆಗಳ ಮೇಲಿನ ಸೇತುವೆಗಳು ಸಹ ಕೊಚ್ಚಿಹೋಗಿವೆ ಎಂದು ವರದಿಯಾಗಿದೆ.
Ribba Nala, Kinnaur today evening.
Today will be a day to remember. And like 2 years ago, it's the first few days of August.#HimachalPradesh #cloudburst #kinnaur #flashflood pic.twitter.com/n5yb4Pmlhx
— Sidharth Shukla (@sidhshuk) August 5, 2025
Due to a cloudburst in Raldang Khad near Ribba, NH-05 is blocked over approx. 100–150 m with muck & boulders. BRO and Administration team are on the site. No loss of life or property reported as of now. pic.twitter.com/rXJjlUTNyc
— DC Kinnaur (@DCKinnaur) August 5, 2025