ಅಮರಾವತಿ : ಇಂದು ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ಒಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಒಂದು ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದು, ಸುಮಾರು 40ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.
ಪರತ್ವಾಡ ಸೆಮದೋಹ್ ಘಟಾಂಗ್ ರಸ್ತೆಯಲ್ಲಿ ತಿರುವುಗಳಿರುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಹಳ್ಳಕ್ಕೆ ಬಿದ್ದಿದೆ. ಅಪಘಾತದ ವೇಳೆ ಬಸ್ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಓರ್ವ ಅಪ್ರಾಪ್ತ ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಿಳೆಯರನ್ನು 65 ವರ್ಷದ ಇಂದು ಸಮಾಧಾನ್ ಗಂಟ್ರೆ ಮತ್ತು 30 ವರ್ಷದ ಲಲಿತಾ ಚಿಮೋಟೆ ಎಂದು ಗುರುತಿಸಲಾಗಿದೆ.
ಸ್ಥಳೀಯ ನಿವಾಸಿಗಳು, ಚಿಕಲ್ದಾರ ಪೊಲೀಸರ ನೆರವಿನೊಂದಿಗೆ ತಕ್ಷಣ ಗಾಯಾಳುಗಳನ್ನು ಅಮರಾವತಿ ಆಸ್ಪತ್ರೆಗೆ ಕಳುಹಿಸಲಾಯಿತು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ತ್ವರಿತಗತಿಯಲ್ಲಿ ಸಾಗಿದೆ.ಅಪಘಾತದ ಕಾರಣಕ್ಕಾಗಿ ತನಿಖೆ ಮುಂದುವರೆದಿದ್ದು, ಅಪಘಾತದ ಸ್ಥಳದಲ್ಲಿ ತುರ್ತು ತಂಡಗಳು ಪ್ರಯತ್ನಗಳನ್ನು ಮುಂದುವರೆಸಿವೆ.
#Amravati, #Maharashtra:
3 people were killed and 50 injured, some of them seriously, in a private bus accident near Semadoh in Amravati district.— Tumhara Bhai Hai (@Tumharabhaihai) September 23, 2024