ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಗುಂಪೊಂದು ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಹೊಡೆದು ಕ್ರೂರವಾಗಿ ಕೊಂದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಒಟ್ಟು ಏಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪ್ರಮೋದ್, ನಾಗರಾಜ್, ಪ್ರದೀಪ್, ರವಿ, ಗೌತಮ್ ಮಂಜುನಾಥ್ ಹಾಗು ಇನ್ನೊರ್ವ ಆರೋಪಿ ಸೇರಿದಂತೆ ಒಟ್ಟು 7 ಜನರನ್ನು ಅರೆಸ್ಟ್ ಮಾಡಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಮೃತನನ್ನು ಚೆನ್ನಪ್ಪ ನಾರಿನಾಳ್ ಎಂದು ಗುರುತಿಸಲಾಗಿದ್ದು, ಆಸ್ತಿಯ ವಿಚಾರವಾಗಿ ಚೆನ್ನಪ್ಪ ನಾರಿನಾಳ್ ನನ್ನು ಬೇಕರಿಯಲ್ಲಿ ನುಗ್ಗಿ ಮಚ್ಚು ಲಾಂಗುಗಳಿಂದ ಅಟ್ಟಾಡಿಸಿ ಕೊಂದಿದ್ದಾರೆ. ದಾಳಿಕೋರರಲ್ಲಿ ಇಬ್ಬರು ಮಚ್ಚಿನಿಂದ ಆತನನ್ನು ಹೊಡೆದಿದ್ದು, ಮತ್ತೊಬ್ಬ ವ್ಯಕ್ತಿ ಮರದ ದಿಮ್ಮಿಯಿಂದ ಆತನ ತಲೆಯ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ.
ದಾಳಿಕೋರರು ಆತನನ್ನು ಬೆನ್ನಟ್ಟುತ್ತಿದ್ದಂತೆ ಅಂಗಡಿಯಲ್ಲಿ ಆ ವ್ಯಕ್ತಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಚೆನ್ನಪ್ಪ ನಾರಿನಾಳ್ ಬೇಕರಿಯಿಂದ ಹೊರಗೆ ಓಡಿಹೋದನು, ನಂತರ ಆತನನ್ನು ಇಬ್ಬರು ಮೂರು ದಾಳಿಕೋರರು ಇರಿದಿದ್ದಾರೆ. ಕೊಲೆಯ ನಂತರ, ಹಲ್ಲೆಕೋರರು ಸ್ಥಳದಿಂದ ಹೊರಟುಹೋದರು. ಘಟನೆ ಸಂಬಂಧ ಪೊಲೀಸರು ಕನಿಷ್ಠ 7 ಜನರನ್ನು ಬಂಧಿಸಿದ್ದಾರೆ,
#BreakingNews | Karnataka: Man murdered in Koppal over old enmity and property dispute@BharadwajSudath | @Elizasherine pic.twitter.com/LQTaIzC1Q4
— News18 (@CNNnews18) June 2, 2025