ಕೋಲಾರ : ಕೇವಲ 4 ಗುಂಟೆ ಜಮೀನು ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದಿದೆ ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ಅಣ್ಣಂದಿರು ತಮ್ಮನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ, ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಎನ್.ಜಿ ಹುಲ್ಕೂರು ಎಂಬ ಗ್ರಾಮದಲ್ಲಿ ನಡೆದಿದೆ.
ಎನ್.ಜಿ ಹುಲ್ಕುರು ಗ್ರಾಮದಲ್ಲಿ 60 ವರ್ಷದ ರಮೇಶ್ ಎನ್ನುವವರನ್ನು ಸ್ವಂತ ಅಣ್ಣಂದಿರೆ ಕೊಲೆ ಮಾಡಿದ್ದಾರೆ. ಅಣ್ಣಂದಿರಾದ ಸಂಪಂಗಿ, ಸೀನಪ್ಪ ಮಟ್ಟು ರಘುಪತಿ ಯಿಂದ ರಮೇಶ್ ಅವರ ಹತ್ಯೆಯಾಗಿದೆ. ರಮೇಶ್ ತಲೆಗೆ ದೊಣ್ಣೆಯಿಂದ ಹೊಡೆದು ಅಣ್ಣಂದಿರು ಕೊಲೆ ಮಾಡಿದ್ದಾರೆ.
ಘಟನೆ ಸಂಬಂಧ ಬೇತಮಂಗಲ ಠಾಣೆ ಪೊಲೀಸರಿಂದ ಆರೋಪಿ ಸೀನಪ್ಪನನ್ನು ಅರೆಸ್ಟ್ ಮಾಡಲಾಗಿದ್ದು ಇನ್ನೂ ತಲೆಮರೆಸಿಕೊಂಡಿರುವ ಸಂಪಂಗಿ ಮತ್ತು ರಘುಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.