ಬೆಂಗಳೂರು : ಕನ್ನಡ ಭಾಷೆಯ ಬಗ್ಗೆ ತಮ್ಮ ಹೇಳಿಕೆಗಳ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ, ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಸುಗಮ ಬಿಡುಗಡೆಗೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಕಮಲ್ ಹಾಸನರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೀಗ ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್ ಜೂನ್ 10 ರಂದು ವಿಚಾರಣೆ ಮಂದೂಡಿ ಆದೇಶ ಹೊರಡಿಸಿತು.
ಇಂದು ಹೈ ಕೋರ್ಟ್ ನಲ್ಲಿ ಕಮಲ್ ಹಾಸನ್ ಸಲ್ಲಿಸಿರುವ ಅರ್ಜಿ ಮತ್ತೆ ಆರಂಭವಾಯಿತು. ನ್ಯಾ. ಎಂ.ನಾಗಪ್ರಸನ್ನ ಅವರಿಂದ ಪೀಠದಲ್ಲಿ ವಿಚಾರಣೆ ಆರಂಭವಾಯಿತು. ವಿಚಾರಣೆ ವೇಳೆ ನಿರ್ಮಾಪಕರ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ಕರ್ನಾಟಕದಲ್ಲಿ ನಾವು ಕಮಲ್ ಹಾಸನವರ ಚಿತ್ರ ಬಿಡುಗಡೆ ಮಾಡಲ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರು ಬಹುಶಹ ಅವರಿಗೆ ಆತ್ಮಪ್ರತಿಷ್ಠೆ ಅಡ್ಡ ಬರುತ್ತಿರಬಹುದು ಎಂದು ಜೂನ್ 10 ರಂದು ವಿಚಾರಣೆ ಮುಂದೂಡಿದರು.
ನ್ಯಾಯಮೂರ್ತಿಗಳು ಹೇಳಿದ್ದನ್ನು ಕಮಲ್ ಹಾಸನ್ ಗೆ ತಿಳಿಸಿದ್ದೇವೆ. ಕಮಲ್ ಹಾಸನ್ ಬರೆದ ಪತ್ರವನ್ನು ಒಮ್ಮೆ ದಯವಿಟ್ಟು ಓದಿ ಕಮಲ್ ಹಾಸನ್ ನಟನೆಯ ರಿಲೀಸ್ ಗೆ ಭದ್ರತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ನಿರ್ಮಾಪಕರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಕಮಲ ಹಾಸನ ಬರೆದಿರುವ ಪತ್ರ ಓದಿದಿರು. ತಮಿಳಿನಂತೆ ಕನ್ನಡ ಕೂಡ ಶ್ರೀಮಂತ ಭಾಷೆ ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ. ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಹೇಳಿದ್ದಾರೆ. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆಪಡುತ್ತೇನೆ ಎಂದು ಪತ್ರ ಓದಿದರು.
ಕಮಲ್ ಹಾಸನ್ ಕ್ಷಮೆಯಾಚಿಸಿದರೆ ಎಲ್ಲಾ ಸರಿ ಹೋಗಲಿದೆ ನಿಜ. ಆದರೆ ಕಮಲ್ ಹಾಸನಿಗೆ ಯಾವುದೇ ದುರುದ್ದೇಶವಿರಲಿಲ್ಲ ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ ಕಮಲ್ ಸಂಸ್ಥೆಯ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಹೇಳಿಕೆ ನೀಡಿದರು. ತಮ್ಮ ಪತ್ರದ ಮೂಲಕ ಕನ್ನಡದ ಪ್ರೀತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಂದು ಪದ ಸೇರಿಸುವ ಒತ್ತಾಯ ಇರಬಾರದು ಎಂದು ವಾದಿಸಿದರು. ಇದಕ್ಕೆ ನ್ಯಾಯಮೂರ್ತಿಗಳು ಒತ್ತಾಯವಲ್ಲ ಬೀಟಿಂಗ್ ಅರೌಂಡ್ ದ ಬುಷ್ ಬೇಡ ಎಂದು ತರಾಟೆಗೆ ತೆಗೆದುಕೊಂಡಿತು.
ನಾನೇ ಕಮಲ್ ಹಾಸನ ಜೊತೆಗೆ ಮಾತನಾಡಿದ್ದೇನೆ ಇದಕ್ಕೂ ಮೀರಿ ಬೇರೆ ಹೇಳಬೇಕಿಲ್ಲ. ಅವರು ಕನ್ನಡದ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ.ಇದಕ್ಕೂ ಮೀರಿ ಬೇರೆ ಹೇಳಬೇಕಿಲ್ಲ ಸಮಯ ಯೋಚನೆ ಮಾಡಲು ಪರೋಕ್ಷವಾಗಿ ಕಮಲ್ ಹಾಸನವರು ಮತ್ತೆ ನಿರಾಕರಿಸಿದ್ದಾರೆ ಯಾವುದೇ ದುರುದ್ದೇಶ ಇಲ್ಲದಿರುವುದರಿಂದ ಕ್ಷಮೆ ಕೇಳುತ್ತಿಲ್ಲ ಹಾಗಾಗಿ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ. ಈ ವೇಳೆ ಕಮಲ್ ಹಾಸನ್ ಆಗಿರಲಿ ಯಾರೇ ಆಗಲಿ ಜನರ ಭಾವನೆ ನೋಯಿಸಬಾರದು ಎಂದು ಜಡ್ಜ್ ಹೇಳಿದರು.ಬಳಿಕ ವಿಚಾರಣೆ ಒಂದು ವಾರ ಮುಂದೂಡುವಂತೆ ವಕೀಲರು ಮನವಿ ಮಾಡಿದ್ದು ಅಲ್ಲದೆ ವಾಣಿಜ್ಯ ಮಂಡಳಿಯೊಂದಿಗೆ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಹೈಕೋರ್ಟಿಗೆ ರಾಜಕುಮಾರ ಸಂಸ್ಥೆಯ ಪರ ವಕೀಲರು ಸ್ಪಷ್ಟಣೆ ನೀಡಿದ್ದಾರೆ.