Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

16 ವರ್ಷಗಳಲ್ಲಿ ಬೇಗನೆ ಪ್ರವೇಶಿಸುತ್ತಿದೆ ಮುಂಗಾರು,24 ಗಂಟೆಗಳಲ್ಲಿ ಕೇರಳಕ್ಕೆ ಪ್ರವೇಶ | Monsoon

24/05/2025 10:44 AM

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

24/05/2025 10:28 AM

BIG NEWS : ಭಯೋತ್ಪಾದಕ ದಾಳಿಯಲ್ಲಿ 20,000 ಭಾರತೀಯರು ಬಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ

24/05/2025 10:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!
KARNATAKA

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

By kannadanewsnow5724/05/2025 10:28 AM

ಮಂಡ್ಯ :-   ಮದ್ದೂರು ಪಟ್ಟಣದ ಶಿವಪುರದ ಕೊಪ್ಪ – ಮದ್ದೂರು ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದ ಮಾಲೀಕರಿಗೆ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಬಿಗ್ ಶಾಕ್ ನೀಡಿದ್ದು, ಶನಿವಾರ ಬೆಳ್ಳಂಬೆಳಿಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಯಿತು.

ಬೆಳ್ಳಂಬೆಳಿಗ್ಗೆ 7 ಗಂಟೆಗೆ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ತೆರಳಿದ ಲೋಕೋಪಯೋಗಿ ಎಇಇ ದೇವಾನಂದ್, ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಸುಮಾರು 70ಕ್ಕೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ಮೂರು ದಿನಗಳ ಮುಂಚೆಯೇ ಮಳಿಗೆಗಳು, ಕಟ್ಟಡಗಳನ್ನು  ಖಾಲಿ ಮಾಡುವಂತೆ ಪುರಸಭೆ, ಲೋಕೋಪಯೋಗಿ ಇಲಾಖೆಗಳು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‌ ಬಳಿಕ ಕೆಲವರು ಖಾಲಿ ಮಾಡಿದ್ದರು, ಕೆಲವರು ತೆರವು ಕಾರ್ಯಾಚರಣೆ ನಡೆಯುವುದಿಲ್ಲ ಎಂಬ ಭರವಸೆಯಲ್ಲಿ ಮನೆಯಲ್ಲಿ ಉಳಿದುಕೊಂಡಿದ್ದರು. ಮುಂಜಾನೆಯೇ ಜೆಸಿಬಿ ಕಾರ್ಯಾಚರಣೆಯ ಸದ್ದು ಕೇಳಿಸುತ್ತಿದ್ದಂತೆ ಮಳಿಗೆ ಕಟ್ಟಡಗಳಲ್ಲಿದ್ದು ಸಾಮಾನುಗಳನ್ನು ಹೊರತಂದು, ಕಣ್ಣೆದುರೇ ನೆಲಸಮ ಆಗುತ್ತಿರುವುದನ್ನು ಕಂಡು ದುಃಖಿತರಾದರು.

ಮದ್ದೂರು – ಕೊಪ್ಪ ರಸ್ತೆಯನ್ನು  ಕೆಲವರು ಒತ್ತುವರಿ ಮಾಡಿಕೊಂಡು ಮಳಿಗೆಗಳು, ಇತರೆ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ನೋಟಿಸ್ ನೀಡಿದ್ದರೂ ಸಹ ತೆರವು ಮಾಡದ ಹಿನ್ನೆಲೆಯಲ್ಲಿ ಇಂದು ಒತ್ತುವರಿ ತೆರವುಗೊಳಿಸಲಾಗುತ್ತಿದೆ  ಎಂದು ಲೋಕೋಪಯೋಗಿ ಇಲಾಖೆ ಎಇಇ ದೇವಾನಂದ್ ಹೇಳಿದರು.

ಇನ್ನು ತೆರವು ಕಾರ್ಯಾಚರಣೆಯ ವಿಷಯ ತಿಳಿದು ಪಟ್ಟಣದ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಮದ್ದೂರು ಪಟ್ಟಣದ ರಸ್ತೆ ಅಗಲೀಕರಣ ಮಾಡಲು ಸದನದಲ್ಲಿ ಅನುಮೋದನೆಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಬೇಕಿದೆ. ಹೀಗಾಗಿ ಇನ್ನು ಕೆಲ ದಿನಗಳಲ್ಲೇ ಪಟ್ಟಣದ ರಸ್ತೆ ಅಗಲೀಕರಣವಾಗುವುದರಿಂದ ಇಂದು ನಡೆದ ರಸ್ತೆ ತೆರವು ಕಾರ್ಯಾಚರಣೆಯೂ ಪೇಟೆ ಬೀದಿಯಲ್ಲಿ ಅಕ್ರಮವಾಗಿ ಮಳಿಗೆ, ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವರದಿ : ಗಿರೀಶ್ ರಾಜ್ ಮಂಡ್ಯ

BREAKING: JCBs roared in Maddur in the early hours of the morning: Road and footpath clearance operation underway!
Share. Facebook Twitter LinkedIn WhatsApp Email

Related Posts

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

24/05/2025 10:21 AM4 Mins Read

BREAKING : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ : ಲೋಕೇಶ್ವರ ಮಹಾರಾಜ ಸ್ವಾಮೀಜಿ ಅರೆಸ್ಟ್.!

24/05/2025 10:08 AM1 Min Read

BREAKING : 24 ಗಂಟೆಗಳಲ್ಲಿ ಕೇರಳಕ್ಕೆ `ಮುಂಗಾರು ಪ್ರವೇಶ’ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ | Monsoon rain

24/05/2025 10:00 AM1 Min Read
Recent News

16 ವರ್ಷಗಳಲ್ಲಿ ಬೇಗನೆ ಪ್ರವೇಶಿಸುತ್ತಿದೆ ಮುಂಗಾರು,24 ಗಂಟೆಗಳಲ್ಲಿ ಕೇರಳಕ್ಕೆ ಪ್ರವೇಶ | Monsoon

24/05/2025 10:44 AM

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

24/05/2025 10:28 AM

BIG NEWS : ಭಯೋತ್ಪಾದಕ ದಾಳಿಯಲ್ಲಿ 20,000 ಭಾರತೀಯರು ಬಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಾಗ್ದಾಳಿ

24/05/2025 10:21 AM

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

24/05/2025 10:21 AM
State News
KARNATAKA

BREAKING : ಬೆಳ್ಳಂಬೆಳಿಗ್ಗೆ ಮದ್ದೂರಿನಲ್ಲಿ ಘರ್ಜಿಸಿದ ಜೆಸಿಬಿಗಳು : ರಸ್ತೆ, ಪುಟ್ ಪಾತ್ ತೆರವು ಕಾರ್ಯಾಚರಣೆ.!

By kannadanewsnow5724/05/2025 10:28 AM KARNATAKA 1 Min Read

ಮಂಡ್ಯ :-   ಮದ್ದೂರು ಪಟ್ಟಣದ ಶಿವಪುರದ ಕೊಪ್ಪ – ಮದ್ದೂರು ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು, ಕಟ್ಟಡಗಳನ್ನು…

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

24/05/2025 10:21 AM

BREAKING : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ : ಲೋಕೇಶ್ವರ ಮಹಾರಾಜ ಸ್ವಾಮೀಜಿ ಅರೆಸ್ಟ್.!

24/05/2025 10:08 AM

BREAKING : 24 ಗಂಟೆಗಳಲ್ಲಿ ಕೇರಳಕ್ಕೆ `ಮುಂಗಾರು ಪ್ರವೇಶ’ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ | Monsoon rain

24/05/2025 10:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.