ಚಿಕ್ಕಬಳ್ಳಾಪುರ : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉಪನ್ಯಾಸಕನ ಬಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದು, ಬಳಿಕ ಹಣ ವಾಪಸ್ ಕೇಳಿದ ಉಪನ್ಯಾಸಕನನ್ನು ಬರ್ಬರವಾಗಿ ಕೊಂದಿದ್ದ ಮೂವರು ಹಂತಕರನ್ನು ಇದೀಗ ಪೊಲಿಸರು ಅರೆಸ್ಟ್ ಮಾಡಿದ್ದಾರೆ.ಬಂಧಿತರನ್ನು ಸುಧಾಕರ್ ಮನೋಜ್ ಮತ್ತು ಮಂಜುನಾಥ್ ಎಂದು ತಿಳಿದುಬಂದಿದೆ.
ಹೌದು ವಿದೇಶದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಇಂದು ಚಿಂತಾಮಣಿ ಗ್ರಾಮಾಂತರ ಠಾಣೆ ಪೋಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ, ವಿದೇಶದಲ್ಲಿ ಉನ್ನತ ಹುದ್ದೆ ಕೊಡಿಸುತ್ತೇವೆ ಎಂದು ಮೊದಲಿಗೆ ಹಣ ವಸೂಲಿ ಮಾಡಿದ್ದಾರೆ ರಾಮಾಂಜಿ ಎಂಬ ವ್ಯಕ್ತಿಯ ಬಳಿ ಆರೋಪಿಗಳು 11,00,000 ಹಣ ವಸೂಲಿ ಮಾಡಿದ್ದಾರೆ.
ಹಣ ವಾಪಸ್ ಕೇಳಿದ್ದಕ್ಕೆ ರಾಮಾಂಜಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಚಲಿಸುವ ಕಾರಿನಲ್ಲಿ ರಾಮಾಂಜಿ ಕತ್ತು ಹಿಸುಕಿ ಕೊಂದು, ಬಳಿಕ ಶವಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿರುವ ಘಟನೆ ನಡೆದಿತ್ತು. ಜೂನ್ 23 ರಂದು ಕೆಂಪದೆಯನಹಳ್ಳಿ ಬಳಿ ಶವ ಪತ್ತೆಯಾಗಿದ್ದು, ಯಲಹಂಕದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ. ರಾಮಾಂಜಿ ಉಪನ್ಯಾಸಕರಾಗಿದ್ದರು. ಸುಧಾಕರ್ ಮನೋಹರ್ ಮತ್ತು ಮಂಜುನಾಥ್ ರಾಮಾಂಜಿಯನ್ನು ಕೊಲೆ ಮಾಡಿದ್ದು ಇಂದು ಅರೆಸ್ಟ್ ಮಾಡಲಾಗಿದೆ.