ಮೈಸೂರು : ಮೈಸೂರು ಜಿಲ್ಲೆಯಲ್ಲಿ ಆಸ್ತಿಗಾಗಿ ಸಂಬಂಧಿಕರ ನಡುವೆ ಹೊಡೆದಾಟ ನಡೆದಿದೆ. ಲಾಂಗು ಮಚ್ಚುಗಳಿಂದ ನಡು ರಸ್ತೆಯಲ್ಲಿಯೇ ಹಲ್ಲೆಗೆ ಯತ್ನ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.
ಯೋಗಮಣಿ ಎಂಬ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. 2.5ಎಕರೆ ಜಮೀನು ಯೋಗಮಣಿ ಪತಿ ರಾಜೇಶ್ ಅವರ ಹೆಸರಿನಲ್ಲಿ ಇತ್ತು. 11 ದಿನಗಳ ಹಿಂದೆ ಅನಾರೋಗ್ಯದಿಂದ ರಾಜೇಶ್ ಮೃತಪಟ್ಟಿದ್ದಾರೆ. ಜಮೀನು ತಮಗೆ ಸೇರಬೇಕು ಎಂದು ರಾಜೇಶ್ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಮಹದೇವಮ್ಮ, ಸೋಮ ಎಂಬುವವರಿಂದ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಯೋಗಮಣಿ ಕೈಮುರಿತವಾಗಿದ್ದು, ಪುತ್ರನ ಸಂಬಂಧಿಗೆ ಗಾಯಗಳಾಗಿವೆ.
ಎರಡೂವರೆ ಎಕರೆ ಜಮೀನು ಯೋಗಮಣಿ ಪತಿ ರಾಜೇಶ್ ಹೆಸರಿನಲ್ಲಿತ್ತು. ರಾಜೇಶ್ ಸಂಬಂಧಿಕರಾದಂತಹ ಮಹಾದೇವಮ್ಮ, ಸೋಮ ಹಾಗೂ ಸೌಮ್ಯ ಎಂಬವರಿಂದ ಗಲಾಟೆ ಆಗಿದೆ. ಇನ್ನು ಜಮೀನು ತಮಗೆ ಸೇರಬೇಕು ಎಂದು ಇತ್ತ ಮೃತ ರಾಜೇಶ್ ಅಜ್ಜಿ ಲಿಂಗಮ್ಮ ಯೋಗಮಣಿ ಹಾಗೂ ಮಗ ಚಂದು, ಮಗಳು ಕೋಮಲ ವಿರುದ್ಧ ಗಲಾಟೆ ಆರಂಭವಾಗಿದೆ, ಮಾರಕಾಷ್ಟ್ರಗಳನ್ನು ಹಿಡಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ.