ಮಂಗಳೂರು : ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿದೆ. ಇದೀಗ ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಒಂದು ಕುಸಿದು ಬಿದ್ದಿದೆ.
ಹೌದು ಮಂಗಳೂರಿನಲ್ಲಿ ಕುಂಭದ್ರೋಣ ಮಳೆಗೆ ಭಾರಿ ಜಲಸ್ಫೋಟ ಸಂಭವಿಸಿದ್ದು, ಕಂಕನಾಡಿ ಬಳಿಯ ಸುವರ್ಣ ಲೇನಲ್ಲಿ ಭಾರಿ ಅವಘಡ ಸಂಭವಿಸಿದೆ. ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಅವಘಡ ಸಂಭವಿಸಿದೆ.ಧಾರಾಕಾರ ಮಳೆಗೆ ಕೊಡಿ ಕುಸಿದು ಮನೆಗಳಿಗೆ ನೀರು ನುಗ್ಗಿದೆ.
ಖಾಸಗಿ ಆಸ್ಪತ್ರೆ ಗೋಡೆ ಕುಸಿತ ಪರಿಣಾಮದಿಂದ ಕೂದಲೆಳೆ ಅಂತರದಲ್ಲಿ ಜ್ಯೋಕಿಂ ಡಿಸೋಜಾ ಎಂಬ ಕುಟುಂಬ ಪಾರಾಗಿದೆ. ಕುಟುಂಬದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚರ್ಚ್ ಗೆ ಹೊರಡಲು ಮನೆಯಿಂದ ಹೊರ ಬರುತ್ತಿದ್ದಂತೆ ಖಾಸಗಿ ಆಸ್ಪತ್ರೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಡಿಸೋಜಾ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ.