ಬೆಂಗಳೂರು : 18 ವರ್ಷಗಳ ನಂತರ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಖುಷಿ RCB ಅಭಿಮಾನಿಗಳಿಗೆ ಬಹಳ ದಿನ ಉಳಿಯಲಿಲ್ಲ. ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ದೂರು ನೀಡಿದ್ದಾರೆ.
ಹೌದು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಎಂ, ಡಿಸಿಎಂ ಸೇರಿದಂತೆ ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ದೂರು ದಾಖಲಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್, ಡಾ. ಶಾಲಿನಿ ರಜನೀಶ್, ಸತ್ಯವತಿ, ಕೆಎಸ್ ಸಿಎ, ಆರ್ ಸಿಬಿ, ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ದಯಾನಂದ್, ವಿಕಾಸ್ ಕುಮಾರ್, ಶೇಖರ್ ತೆಕ್ಕಣನವರ್, ವಿಧಾನಸೌಧ ಡಿಸಿಪಿ ಕರಿಬಸನಗೌಡ ಸೇರಿ ಹಲವರ ವಿರುದ್ಧ ದೂರು ನೀಡಿದ್ದಾರೆ.
ಕಳೆದ ಜೂನ್ 4 ರಂದು ಬೆಂಗಳೂರಿನಲ್ಲಿ ದುರಂತ ನಡೀತು. 11 ಜನರು ಸಾವಿಗೆ ಉತ್ತರವನ್ನ ಕೊಡಬೇಕು. ಆರ್ ಸಿಬಿ ಮತ್ತು ಡಿಕೆ ಶಿವಕುಮಾರ್ ನಡುವಿನ ಕನೆಕ್ಷನ್ ಏನು? ಡಿಕೆ ಶಿವಕುಮಾರ್ ಗೂ ಕ್ರಿಕೆಟ್ ಗೂ ಏನು ಸಂಬಂಧ? ಆರ್ ಸಿಬಿ ನ ಕೊಂಡುಕೊಳ್ಳಬೇಕು ಅಂತಿದ್ರು. 8 ಸಾವಿರದ 600 ಕೋಟಿ ರೂಪಾಯಿಗೆ ಪ್ಲ್ಯಾನ್ ಮಾಡಿದ್ದರು. 17 ಸಾವಿರ ಕೋಟಿ ರೂ. ಇದ್ರೆ ಮುಂದುವರಿಬೋದು ಎನ್ನುವುದು ಗೊತ್ತಾಗತ್ತೆ ಎಂದು ಸ್ಫೋಟಕ ಆರೋಪಿಸಿದ್ದಾರೆ.
RCB ಮ್ಯಾಚ್ ಫಿಕ್ಸ್ ಆಗಿದೆ!
ಇನ್ನು ಮೂರನೇ ತಾರೀಕು ಡಿಎನ್ಎ ಅವರು ಪತ್ರ ಬರೀತಾರೆ. ಆರ್ ಸಿಬಿ ವಿಕ್ಟರಿ ಪರೇಡ್ ಇರುತ್ತೆ ಎಂದು ಕಬ್ಬನ್ ಪಾರ್ಕ್ ಎಸಿಪಿಗೆ ರಿಕ್ವೆಸ್ಟ್ ಲೆಟರ್ ಕೊಡುತ್ತಾರೆ. ಮ್ಯಾಚ್ಗೂ ಮುನ್ನ ವಿನ್ ಆಗುತ್ತಾರೆ ಎಂದು ಹೇಗೆ ಗೊತ್ತಾಯ್ತು? ಎಂದು ಪ್ರಶ್ನಿಸಿದ್ದಾರೆ. ಡಿಎನ್ಎ ಅವರ ಪ್ಲ್ಯಾನ್ 2 ವರೆ ಕಿಲೋ ಮೀಟರ್ ವಿಕ್ಟರಿ ಪರೇಡ್ ಗೆ ರೆಡಿಯಾಗಿತ್ತು. ಬಸ್ ನಲ್ಲಿ ಓಪನ್ ಪರೇಡ್ ಆಗಿದ್ರೆ ರಸ್ತೆಯಲ್ಲಿ ನಿಂತಿದ್ದ ಜನ ನೋಡಿಕೊಂಡು ಮನೆಗೆ ಹೋಗುತ್ತಿದ್ದರು. ಒಂದೇ ಕಡೆ ಆಗಿದ್ದರಿಂದ ಈ ರೀತಿ ಆಗಿರುವುದ. ಕಾರ್ಯಕ್ರಮವನ್ನ ಎರಡು ದಿನ ಮುಂದೂಡಿದ್ರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.