ಬೆಂಗಳೂರು : ರಾಜ್ಯದಲ್ಲಿ ಇದುವರೆಗೂ ಕೊರೊನಾ ಇಂದ 11 ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಆದರೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಮೃತಪಟ್ಟ 11 ಜನರು ಕೋವಿಡ್ ಇಂದ ಸತ್ತಿಲ್ಲ ಎಂದು ಇದೀಗ ಸ್ಪಷ್ಟನೆ ನೀಡಿದ್ದಾರೆ. ಇದೀಗ ರಾಜ ಆರೋಗ್ಯ ಇಲಾಖೆ ಕೂಡ ಕೋಮಾರ್ಬಿಟಿಸ್ ನಿಂದ ಮೃತಪಟ್ಟರೆ ಕೋವಿಡ್ ಎಂದು ಪರಿಗಣಿಸುವುದಿಲ್ಲ ಎಂದು ಆರೋಗ್ಯ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಹೌದು ಕೋಮಾರ್ಬಿಟಿಸ್ ನಿಂದ ಮೃತಪಟ್ಟರೆ ಕೋವಿಡ್ ಎಂದು ಪರಿಗಣಿಸಬೇಡಿ. ಕೋವಿಡ್ ಸಾವೆಂದು ಪರಿಗಣಿಸದಿರಲು ರಾಜ್ಯ ಆರೋಗ್ಯ ಇಲಾಖೆ ಇದೀಗ ತೀರ್ಮಾನಿಸಿದೆ. ಇ ಕುರಿತು ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಷ್ಟು ದಿನ ಕೋಮಾರ್ಬಿಟಿಸ್ ಸಾವು ಕೋವಿಡ್ ಎಂದು ವರದಿ ಬಂದಿದೆ.
ಆದರೆ ಇನ್ಮುಂದೆ ಕೋಮಾರ್ಬಿಟೀಸ್ ರೋಗಿಗೆ ಕೋವಿಡ್ ಬಂದರೆ ಪರಿಗಣನೆ ಆಗಲ್ಲ. ಕೋಮಾರ್ಬಿಟಿಸ್ ಇಲ್ಲದ ವ್ಯಕ್ತಿಗೆ ಕೋವಿಡ್ ಬಂದರೆ ಮಾತ್ರ ಪರಿಗಣನೆ, ಕೋವಿಡ್ ಬಂದು ಮೃತಪಟ್ಟರೆ ಮಾತ್ರ ಬುಲೆಟಿನಲ್ಲಿ ವರದಿ ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬುಲೆಟಿನ್ ನಲ್ಲಿ ಇದ್ದಂತಹ ಸಾವಿನ ವರದಿ ಆರೋಗ್ಯ ಇಲಾಖೆ ಇದೀಗ ತೆಗೆದುಹಾಕಿದೆ.