Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನಲ್ಲಿ ವೃದ್ಧೆಯನ್ನು ಕೊಂದು ಮಾಂಗಲ್ಯ ಸರ ಕದ್ದು ದುಷ್ಕರ್ಮಿ ಪರಾರಿ.!

05/11/2025 7:06 AM

ರಾಜಕೀಯ ಪಕ್ಷಗಳ ಪಾರದರ್ಶಕತೆ: ನಿಯಮ, ದೇಣಿಗೆ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

05/11/2025 6:58 AM

AI ಪವಾಡ : ಕೃತಕ ಬುದ್ಧಿಮತ್ತೆಯಿಂದ 19 ವರ್ಷಗಳ ನಂತರ ಸಂತಾನ ಭಾಗ್ಯ!

05/11/2025 6:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವರಿಷ್ಟರ ಮಾಹಿತಿ ಪ್ರಕಾರ ಚನ್ನಪಟ್ಟಣ ಟಿಕೆಟ್ ನನಗೆ ಸಿಗುತ್ತೆ : MLC ಸಿಪಿ ಯೋಗೇಶ್ವರ್ ಹೇಳಿಕೆ
KARNATAKA

BREAKING : ವರಿಷ್ಟರ ಮಾಹಿತಿ ಪ್ರಕಾರ ಚನ್ನಪಟ್ಟಣ ಟಿಕೆಟ್ ನನಗೆ ಸಿಗುತ್ತೆ : MLC ಸಿಪಿ ಯೋಗೇಶ್ವರ್ ಹೇಳಿಕೆ

By kannadanewsnow0516/10/2024 2:37 PM

ರಾಮನಗರ : ರಾಜ್ಯದ ಮೂರು ಉಪಚುನಾವಣೆಗಳ ದಿನಾಂಕ ನಿನ್ನೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಪ್ರಬಲವಾದ ಕ್ಷೇತ್ರವಾಗಿದೆ. ಏಕೆಂದರೆ Hd ಕುಮಾರಸ್ವಾಮಿ ಹಾಗೂ ಡಿಕೆ ಬ್ರದರ್ಸ್ ಅವರ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಹಾಗಾಗಿ ಒಂದು ಉಪಚುನಾವಣೆ ಬಹಳ ಕುತೂಹಲಕಾರಿ ಆಗಿದೆ. ಅಲ್ಲದೆ ವರಿಷ್ಠ ಮಾಹಿತಿಯ ಪ್ರಕಾರ ಚನ್ನಪಟ್ಟಣ ಟಿಕೆಟ್ ನನಗೆ ಸಿಗುತ್ತದೆ ಎಂದು ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿಪಿ ಯೋಗೇಶ್ವರ್ ಅವರು, ವರಿಷ್ಟರ ಮಾಹಿತಿ ಪ್ರಕಾರ ನನಗೆ ಚನ್ನಪಟ್ಟಣ ಟಿಕೇಟ್ ಸಿಗುತ್ತದೆ. ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಂಎಲ್ಸಿ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು.

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದೆ. ನನ್ನನ್ನು ಜನರು ಪಕ್ಷಾಂತರ ಅಂತ ಕರೆಯುತ್ತಾರೆ. ಆದರೆ ನಾನು ಪಕ್ಷಾಂತರ ಮಾಡಿದ್ದು ತಾಲೂಕಿನ ಅಭಿವೃದ್ಧಿಗಾಗಿ. ರಾಷ್ಟ್ರ ರಾಜಕಾರಣಕ್ಕೆ ನರೇಂದ್ರ ಮೋದಿ ಅವರೇ ಬಂದಿರಲಿಲ್ಲ. ಆಗಲೇ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಇಬ್ಬರ ನಡುವೆ ಸೋಲು ಕಂಡಿದ್ದೇನೆ. ಆದರೆ ಈಗ ನಮ್ಮ ಪಕ್ಷ ಸದೃಢವಾಗಿದೆ.

ಈಗ ಚುನಾವಣೆ ಬಂದಿದೆ ಜನ ಮತ್ತೆ ನನ್ನನ್ನು ಶಾಸಕನನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಂದ ತೊಂದರೆ ಬಂದಾಗ ಜನರು ಕಾಪಾಡಿದ್ದಾರೆ. ಬಿಜೆಪಿ ಮುಖಂಡರು ಕಾರ್ಯಕರ್ತರು ನನ್ನ ಹೆಸರು ಹೇಳುತ್ತಿದ್ದಾರೆ. ಏಕೆಂದರೆ ನನ್ನ ರಾಜಕೀಯ ಜೀವನದಲ್ಲಿ ಸೇಡು ದ್ರೋಹ ಮಾಡಿಲ್ಲ. ಜೆಡಿಎಸ್ ನ ಬಹುತೇಕ ಜನ ಕರೆ ಮಾಡಿ ನೀವೇ ಸ್ಪರ್ಧಿಸಿ ಅಂತಿದ್ದಾರೆ.

ಡಿಕೆ ಶಿವಕುಮಾರ್ ರಾಜ್ಯದ ಡಿಸಿಎಂ ಆಗಿದ್ದು, ಸಿಎಂ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ 136 ಶಾಸಕರಿದ್ದಾರೆ. ಅವರಿಗೆ ಚನ್ನಪಟ್ಟಣ ಯಾಕೆ ಬೇಕು? ಡಿಕೆ ಶಿವಕುಮಾರ್ ಏಕೆ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ ಹೇಳುತ್ತಾರೆ.ಕ್ಷೇತ್ರದಲ್ಲಿ ನಾನು ಒಬ್ಬ ಇದ್ದೀನಿ ಅಂತ ತೋರಿಸಕ್ಕೆ ಬಂದಿದ್ದಾರೆ. ಆದರೆ ಡಿಸಿಎಂ ಇಲ್ಲಿ ಸೀರಿಯಸ್ ಆಗಿ ಚುನಾವಣೆ ಮಾಡುವುದಿಲ್ಲ.

ಕುಮಾರಸ್ವಾಮಿ ಕೂಡ ಈಗ ನಾನೇ ಅಭ್ಯರ್ಥಿ ಅಂತ ಹೇಳುತ್ತಿದ್ದಾರೆ. ಹಾಗಂತ ಹೆಚ್‍ಡಿ ಕುಮಾರಸ್ವಾಮಿ ಬಂದು ಚುನಾವಣೆಗೆ ನಿಲ್ಲುವುದಿಲ್ಲ ನಾನು ಸ್ಪರ್ಧೆ ಮಾಡಿದ್ರು ಕುಮಾರಸ್ವಾಮಿ ಅಭ್ಯರ್ಥಿ ಅಂದುಕೊಳ್ಳಿ. ಕುಮಾರಸ್ವಾಮಿ ಎರಡು ಸೀಟಿಗೆದ್ದರು ಕೇಂದ್ರ ಮಂತ್ರಿ ಆಗಿದ್ದಾರೆ. ಮತ್ತೆ ಸಿಎಂ ಆಗ್ತೀನಿ ಅಂತಿದ್ದಾರೆ ಅದಕ್ಕೂ ನಾವು ಶುಭ ಕೋರುತ್ತೇವೆ. ಕಾಂಗ್ರೆಸ್ಸಿನ ಹಲವು ಮುಖಂಡರು ನನ್ನ ಪರವಾಗಿ ಕೆಲಸ ಮಾಡುತ್ತಾರೆ ಎಂದು ಸಿಪಿ ಯೋಗೇಶ್ವರ್ ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ವೃದ್ಧೆಯನ್ನು ಕೊಂದು ಮಾಂಗಲ್ಯ ಸರ ಕದ್ದು ದುಷ್ಕರ್ಮಿ ಪರಾರಿ.!

05/11/2025 7:06 AM1 Min Read

BIG NEWS : ರಾಜ್ಯದಲ್ಲಿ ನವೆಂಬ‌ರ್ ತಿಂಗಳನ್ನು `ಮಕ್ಕಳ ಮಾಸ’ವೆಂದು ಘೋಷಣೆ : ಮಕ್ಕಳ ರಕ್ಷಣಾ ನಿರ್ದೇಶನಾಲಯ ಆದೇಶ

05/11/2025 6:47 AM1 Min Read

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : `SSLC ಪರೀಕ್ಷೆ-1’ ನೋಂದಣಿ ಅವಧಿ ನ.15ರವರೆಗೆ ವಿಸ್ತರಣೆ

05/11/2025 6:41 AM1 Min Read
Recent News

BREAKING : ಬೆಂಗಳೂರಿನಲ್ಲಿ ವೃದ್ಧೆಯನ್ನು ಕೊಂದು ಮಾಂಗಲ್ಯ ಸರ ಕದ್ದು ದುಷ್ಕರ್ಮಿ ಪರಾರಿ.!

05/11/2025 7:06 AM

ರಾಜಕೀಯ ಪಕ್ಷಗಳ ಪಾರದರ್ಶಕತೆ: ನಿಯಮ, ದೇಣಿಗೆ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

05/11/2025 6:58 AM

AI ಪವಾಡ : ಕೃತಕ ಬುದ್ಧಿಮತ್ತೆಯಿಂದ 19 ವರ್ಷಗಳ ನಂತರ ಸಂತಾನ ಭಾಗ್ಯ!

05/11/2025 6:52 AM

SHOCKING : ಭಾರತದಲ್ಲಿ `ಓವರ್ ಡೋಸ್ ಡ್ರಗ್’ನಿಂದ ಪ್ರತಿ ವಾರ 12 ಮಂದಿ ಬಲಿ : NCRB ವರದಿ

05/11/2025 6:49 AM
State News
KARNATAKA

BREAKING : ಬೆಂಗಳೂರಿನಲ್ಲಿ ವೃದ್ಧೆಯನ್ನು ಕೊಂದು ಮಾಂಗಲ್ಯ ಸರ ಕದ್ದು ದುಷ್ಕರ್ಮಿ ಪರಾರಿ.!

By kannadanewsnow5705/11/2025 7:06 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆಯಾಗಿದ್ದು, ಉಸಿರುಗಟ್ಟಿಸಿ ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಮಾಂಗಲ್ಯ ಸರ ಕದ್ದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಶ್ರೀಲಕ್ಷ್ಮೀ…

BIG NEWS : ರಾಜ್ಯದಲ್ಲಿ ನವೆಂಬ‌ರ್ ತಿಂಗಳನ್ನು `ಮಕ್ಕಳ ಮಾಸ’ವೆಂದು ಘೋಷಣೆ : ಮಕ್ಕಳ ರಕ್ಷಣಾ ನಿರ್ದೇಶನಾಲಯ ಆದೇಶ

05/11/2025 6:47 AM

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : `SSLC ಪರೀಕ್ಷೆ-1’ ನೋಂದಣಿ ಅವಧಿ ನ.15ರವರೆಗೆ ವಿಸ್ತರಣೆ

05/11/2025 6:41 AM

‘ರಾಜ್ಯದ ಸರ್ಕಾರಿ ನೌಕರ’ರಿಗೆ ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ನೋಂದಣಿ ಕುರಿತು ಮಹತ್ವದ ಮಾಹಿತಿ

05/11/2025 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.