ಬೆಂಗಳೂರು : ಖ್ಯಾತ ಸಾಹಿತಿ HS ಕೃಷ್ಣಮೂರ್ತಿ ನಿಧನ ಹೊಂದಿದ್ದಾರೆ.ಕಿರಿಕ್ ಪಾರ್ಟಿ, ಅಮೆರಿಕಾ ಅಮೆರಿಕಾ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಕನ್ನಡದ ಖ್ಯಾತ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ.
ಎಚ್.ಎಸ್. ವೆಂಕಟೇಶಮೂರ್ತಿ (ಎಚ್ಎಸ್ವಿ ) ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ಅವರು 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದರು. ಎಚ್ಎಸ್ವಿ ಅವರು 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಪರಿವೃತ್ತ, ಬಾಗಿಲು ಬಡಿವ ಜನಗಳು, ಸೌಗಂಧಿಕ, “ಮೂವತ್ತು ಮಳೆಗಾಲ” ಇತ್ಯಾದಿ ಸೇರಿವೆ. ಅವರು “ಹೆಜ್ಜೆಗಳು”, “ಒಂದು ಸೈನಿಕ ವೃತ್ತಾಂತ”, “ಅಗ್ನಿವರ್ಣ” ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಅವರು ಚಿನ್ನಾರಿ ಮುತ್ತ, ಕೋಟ್ರೇಶಿ ಕನಸು”, “ಅಮೆರಿಕಾ ಅಮೆರಿಕಾ”, “ಮೈತ್ರಿ”, “ಕಿರಿಕ್ ಪಾರ್ಟಿ” ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. “ಮುಕ್ತ”, “ಮಹಾಪರ್ವ” ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದಾರೆ.
ಎಚ್ಎಸ್ವಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದಿದ್ದಾರೆ. ಅವರು ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. “ಕನ್ನಡದಲ್ಲಿ ಕಥನ ಕವನಗಳು” ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಎಚ್ಎಸ್ವಿ ಅವರು 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಪರಿವೃತ್ತ, ಬಾಗಿಲು ಬಡಿವ ಜನಗಳು, ಸೌಗಂಧಿಕ, “ಮೂವತ್ತು ಮಳೆಗಾಲ” ಇತ್ಯಾದಿ ಸೇರಿವೆ. ಅವರು “ಹೆಜ್ಜೆಗಳು”, “ಒಂದು ಸೈನಿಕ ವೃತ್ತಾಂತ”, “ಅಗ್ನಿವರ್ಣ” ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಅವರು ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಅವರು ಚಿನ್ನಾರಿ ಮುತ್ತ, ಕೋಟ್ರೇಶಿ ಕನಸು”, “ಅಮೆರಿಕಾ ಅಮೆರಿಕಾ”, “ಮೈತ್ರಿ”, “ಕಿರಿಕ್ ಪಾರ್ಟಿ” ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. “ಮುಕ್ತ”, “ಮಹಾಪರ್ವ” ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದಾರೆ.
ಜೀವನ ಚರಿತ್ರೆ
• ‘ಸಿ.ವಿ.ರಾಮನ್'(೧೯೭೪)
• ‘ಹೋಮಿ ಜಹಾಂಗೀರ ಭಾಭಾ'(೧೯೭೫)
• ‘ಸೋದರಿ ನಿವೇದಿತಾ'(೧೯೯೫)
• ‘ಬಾಹುಬಲಿ'(೨೦೦೦)
• ಆತ್ಮ ಕಥನ-‘ಎಚ್ಚೆಸ್ವಿ ಅನಾತ್ಮ ಕಥನ’ (೨೦೧೦)
ಕಥಾ ಸಂಕಲನಗಳು
• ‘ಬಾನಸವಾಡಿಯ ಬೆಂಕಿ'(೧೯೮೦)
• ‘ಪುಟ್ಟಾರಿಯ ಮತಾಂತರ'(೧೯೯೦);
ಕಾದಂಬರಿಗಳು
• ‘ತಾಪಿ'(೧೯೭೮)
• ‘ಅಮಾನುಷರು'(೧೯೮೦)
• ‘ಕದಿರನ ಕೋಟೆ'(೧೯೮೫)
• ‘ಅಗ್ನಿಮುಖಿ'(೧೯೮೬)