ಮಂಗಳೂರು : ಮಂಗಳೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಮಂಗಳೂರಿನಿಂದ ಸುರತ್ಕಲ್ ಕಡೆ ಬರುತ್ತಿದ್ದಾಗ ಬೈಕಂಪಾಡಿ ಬಳಿ ಹೆದ್ದಾರಿಯಲ್ಲಿ ಇದ್ದ ಹೊಂಡಕ್ಕೆ ಸ್ಕೂಟರ್ ಸಿಲುಕಿ ಪಲ್ಟಿಯಾದ ವೇಳೆ ಟ್ಯಾಂಕರ್ ಹರಿದು ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಸುರತ್ಕಲ್ ಸಮೀಪದ ಆಶ್ರಯ ಕಾಲನಿ ನಿವಾಸಿ ಅಶ್ರಫ್ (36) ಎಂದು ತಿಳಿದುಬಂದಿದೆ. ಮೂಲ್ಕಿಯ ಶಾಹಿಲ್ (35) ಗಂಭೀರ ಗಾಯಗೊಂಡು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕಂಪಾಡಿ ಸಮೀಪ ಹೆದ್ದಾರಿಯಲ್ಲಿ ಆಗಿರುವ ಹೊಂಡಕ್ಕೆ ಸ್ಕೂಟರ್ನ ಟೈಯರ್ ಸಿಲುಕಿ ಪಲ್ಟಿಯಾಗಿದೆ.
ಈ ಸಂದರ್ಭದಲ್ಲಿ ರಸ್ತೆಗೆ ಬಿದ್ದ ಅಶ್ರಫ್ ಅವರ ಮೇಲೆ ಹಿಂದಿನಿಂದ ಬಂದ ಟ್ಯಾಂಕರ್ ಚಲಿಸಿದ್ದರಿಂದ ಮೃತಪಟ್ಟರು. ಸುರತ್ಕಲ್ನಲ್ಲಿ ಪರಿಚಿತರಾಗಿದ್ದ ಇವರು ಹೂ ವ್ಯಾಪಾರ, ಹೊಟೇಲ್ ಮತ್ತಿತರ ವ್ಯವಹಾರ ನಡೆಸುತ್ತಿದ್ದರು. ಅವರು ಕೊರೊನಾ ಸಂದರ್ಭ ಕಿಟ್ ವಿತರಿಸಿ ಹಲವರಿಗೆ ನೆರವಾಗಿದ್ದರು. ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.