ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಹೃದಯವಿದ್ರಾವಕ ಒಂದು ಘಟನೆ ನಡೆದಿದ್ದು ಯಾರೋ ಪಾಪಿಗಳು ವಿಷಯುಕ್ತ ಆಹಾರ ನೀಡಿದರಿಂದ ಅದನ್ನು ತಿಂದು ರಕ್ತವಾಂತಿ ಮಾಡು ಮತ್ತು ಐದು ಶ್ವಾನಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಕೆ.ಆರ್ ಪುರಂನ ಭಟ್ಟರಹಳ್ಳಿಯಲ್ಲಿ ನಿನ್ನೆ ಈ ಒಂದು ಘಟನೆ ನಡೆದಿದ್ದು, ರಕ್ತವಾಂತಿ ಮಾಡುತ್ತ ತೀವ್ರ ಅಸ್ವಸ್ಥಗೊಂಡಿದ್ದ 6 ಬೀದಿನಾಯಿಗಳಲ್ಲಿ 5 ಬೀದಿನಾಯಿಗಳು ರಸ್ತೆಯಲ್ಲಿಯೇ ಒದ್ದಾಡಿ ಸಾವನ್ನಪ್ಪಿವೆ. ಒಂದು ನಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೀದಿನಾಯಿಗಳು ಸಾವನ್ನಪ್ಪುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ನಾಯಿಗಳು ಆಹಾರ ತಿಂದ ಕೆಲ ಹೊತ್ತಿನಲ್ಲೇ ವಿಚಿತ್ರವಾಗಿ ನರಳಾಡಿವೆ ತಕ್ಷಣ ಸ್ಥಳೀಯರು ಎಲ್ಲ ನಾಯಿಗಳಿಗೆ ನೀರು ಕುಡಿಸಿದ್ದಾರೆ. ಆದರೆ ಆರು ನಾಯಿಗಳಲ್ಲಿ ಐದು ನಾಯಿಗಳು ರಕ್ತದ ವಾಂತಿ ಮಾಡುತ್ತ ಒದ್ದಾಡುತ್ತಾ ಸಾವನ್ನಪ್ಪಿವೆ. ಒಂದು ನಾಯಿ ಮಾತ್ರ ಬದುಕು ಉಳಿದಿದೆ. ಬಿಬಿಎಂಪಿ ಅಧಿಕಾರಿಗಳ ದೂರಿನ ಮೇರೆಗೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.