Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING :ಮದ್ಯದ ಅಮಲಿನಲ್ಲಿ ರಸ್ತೆ ಬಿದ್ದು ಹೊರಳಾಡಿದ ತಾಯಿ, ಪಕ್ಕದಲ್ಲೇ ಅಳುತ್ತಿದ್ದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold Rate Today

​ಮೇ 18ಕ್ಕೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold Rate Today
INDIA

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold Rate Today

By kannadanewsnow57

ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಭಾರಿ ನಿರಾಳತೆ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಹಳದಿ ಲೋಹದ ಬೆಲೆಯಲ್ಲಿ ಇಂದು ಭಾರಿ ಕುಸಿತ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕೆಲವು ಪ್ರಮುಖ ಬೆಳವಣಿಗೆಗಳು ಮತ್ತು ಆರ್ಥಿಕ ಬದಲಾವಣೆಗಳಿಂದಾಗಿ ಚಿನ್ನ ಹಾಗೂ ಬೆಳ್ಳಿಯ ದರಗಳು ದಿಢೀರ್ ಇಳಿಕೆ ಕಂಡಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನ ಮತ್ತು ಬೆಳ್ಳಿಯ ಮೇಲಿನ ಸುಂಕವನ್ನು ಹೆಚ್ಚಿಸಿದ ಕಾರಣ ಬೆಲೆಗಳು ಆಕಾಶಕ್ಕೆ ಮುಟ್ಟಿದ್ದವು. ಆದರೆ, ಆ ಬೆಲೆಯೇರಿಕೆಯ ಬೆನ್ನಲ್ಲೇ ಇದೀಗ ಮಾರುಕಟ್ಟೆಯಲ್ಲಿ ಮತ್ತೆ ದರಗಳು ಇಳಿಮುಖವಾಗಿವೆ.

ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ವಿವರಗಳು:

ಶನಿವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಈ ಕೆಳಗಿನಂತಿವೆ:

24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,57,900

22 ಕ್ಯಾರೆಟ್ ಚಿನ್ನ (10 ಗ್ರಾಂ): ₹1,44,740

ಬೆಳ್ಳಿ (1 ಕೆಜಿ): ₹2,89,900

ಬೆಲೆಯಲ್ಲಿನ ಇಳಿಕೆ:
ಶುಕ್ರವಾರದ ದರಕ್ಕೆ ಹೋಲಿಸಿದರೆ ಇಂದು 24 ಕ್ಯಾರೆಟ್ ಚಿನ್ನದ ಮೇಲೆ ಬರೋಬ್ಬರಿ ₹4,420 ಇಳಿಕೆಯಾಗಿದೆ. ಹಾಗೆಯೇ, 22 ಕ್ಯಾರೆಟ್ ಚಿನ್ನದ ದರದಲ್ಲಿ ₹4,050 ಕಡಿತವಾಗಿದೆ. ಇನ್ನು ಬೆಳ್ಳಿಯ ವಿಷಯಕ್ಕೆ ಬಂದರೆ, ನಿನ್ನೆಗಿಂತ ಇಂದು ಒಂದು ಕಿಲೋ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ ₹10,000 ನಷ್ಟು ಭಾರಿ ಕುಸಿತ ದಾಖಲಾಗಿದೆ.

ಬೆಳ್ಳಿ ದರ ವಿವರ:
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ಬೆಲೆಯೂ ಇಂದು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಂದು ಬೆಳಿಗ್ಗೆಯ ವೇಳೆಗೆ ದೇಶಾದ್ಯಂತ ಕೆಜಿ ಬೆಳ್ಳಿಗೆ ₹10,000 ಇಳಿಕೆಯಾಗಿದೆ.

ಹೈದರಾಬಾದ್, ವಿಜಯವಾಡ, ಚೆನ್ನೈ ಮತ್ತು ಕೇರಳ: 1 ಕೆಜಿ ಬೆಳ್ಳಿ ಬೆಲೆ ₹3,04,900 ಆಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತಾ: 1 ಕೆಜಿ ಬೆಳ್ಳಿ ಬೆಲೆ ₹2,89,900 ರಂತೆ ಮಾರಾಟವಾಗುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (10 ಗ್ರಾಂಗೆ):

ನಗರ 24 ಕ್ಯಾರೆಟ್ ಚಿನ್ನದ ದರ 22 ಕ್ಯಾರೆಟ್ ಚಿನ್ನದ ದರ
ಬೆಂಗಳೂರು ₹1,57,900 ₹1,44,740
ಹೈದರಾಬಾದ್ ₹1,57,900 ₹1,44,740
ವಿಜಯವಾಡ ₹1,57,900 ₹1,44,740
ಮುಂಬೈ ₹1,57,900 ₹1,44,740
ಕೋಲ್ಕತಾ ₹1,57,900 ₹1,44,740
ದೆಹಲಿ ₹1,58,050 ₹1,44,890
ಚೆನ್ನೈ ₹1,61,070 ₹1,47,640
BREAKING: Great news for jewelry lovers: Huge drop in gold and silver prices | Gold Rate Today
Share. Facebook Twitter LinkedIn WhatsApp Email

Related Posts

SHOCKING :ಮದ್ಯದ ಅಮಲಿನಲ್ಲಿ ರಸ್ತೆ ಬಿದ್ದು ಹೊರಳಾಡಿದ ತಾಯಿ, ಪಕ್ಕದಲ್ಲೇ ಅಳುತ್ತಿದ್ದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

1 Min Read

​ಮೇ 18ಕ್ಕೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!

1 Min Read

Shocking: ವಿಶ್ವದ ಟಾಪ್ 10 ಅತ್ಯಂತ ಕಲುಷಿತ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ; 7ನೇ ಸ್ಥಾನದಲ್ಲಿ ಭಾರತ!

3 Mins Read
Recent News

SHOCKING :ಮದ್ಯದ ಅಮಲಿನಲ್ಲಿ ರಸ್ತೆ ಬಿದ್ದು ಹೊರಳಾಡಿದ ತಾಯಿ, ಪಕ್ಕದಲ್ಲೇ ಅಳುತ್ತಿದ್ದ ಮಗು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ | Gold Rate Today

​ಮೇ 18ಕ್ಕೆ ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಪ್ರಮಾಣ ವಚನ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ, ಕಾರ್ಯಕ್ರಮದಿಂದ ಶಶಿ ತರೂರ್ ದೂರ!

Shocking: ವಿಶ್ವದ ಟಾಪ್ 10 ಅತ್ಯಂತ ಕಲುಷಿತ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ; 7ನೇ ಸ್ಥಾನದಲ್ಲಿ ಭಾರತ!

State News
KARNATAKA

ಪೆಟ್ರೋಲ್, ಡೀಸೆಲ್ vs CNG : ನಿಮ್ಮ ಕಾರಿಗೆ ಯಾವುದು ಬೆಸ್ಟ್? ಇಲ್ಲಿದೆ ಕಂಪ್ಲೀಟ್ ಕ್ಯಾಲ್ಕುಲೇಶನ್!

By kannadanewsnow57 KARNATAKA 2 Mins Read

ಬೆಂಗಳೂರು: ಇಂದು ಭಾರತದಲ್ಲಿ ಹೊಸ ಕಾರು ಖರೀದಿಸುವಾಗ ಪ್ರತಿಯೊಬ್ಬರನ್ನೂ ಕಾಡುವ ಅತಿ ದೊಡ್ಡ ಗೊಂದಲವೆಂದರೆ—ಪೆಟ್ರೋಲ್, ಡೀಸೆಲ್ ಅಥವಾ ಸಿಎನ್ಜಿ (CNG)…

BREAKING : ಹಾಸನದಲ್ಲಿ ಟೈರ್ ಸ್ಪೋಟಗೊಂಡು ಹೊತ್ತಿ ಉರಿದ ಖಾಸಗಿ ಬಸ್ :36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ನಿಮ್ಮ ‘ಬೋಳು’ ತಲೆಗೆ ತಾಯಿಯ ಕಡೆಯವರೇ ಹೆಚ್ಚು ಕಾರಣ: ಆಘಾತಕಾರಿ ಮಾಹಿತಿ ಬಹಿರಂಗ.!

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ 4-5 ದಿನ ಭಾರಿ ಮಳೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.