ಬೆಂಗಳೂರು : ರಾಜ್ಯದ ಇತಿಹಾಸದಲ್ಲಿ ಮತ್ತೊಂದು ಬಹುದೊಡ್ಡ ಹಗರಣ ಬಯಲಿಗೆ ಬಂದಿದ್ದು, ಸಾಕ್ಷಿ ಸಮೇತ ಇಬ್ಬರು ಐಪಿಎಸ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಇದು ಬೇಲಿಯೇ ಇದು ಕಥೆಯಾಗಿದೆ. ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಕರ್ತವ್ಯವನ್ನು ದಂಧೆ ಮಾಡಿಕೊಂಡಿದ್ದರು. ಸರ್ಕಾರಿ ಅಧಿಕಾರಿಗಳಿಗೆ ದಾಳಿ ಮಾಡುವ ಬೆದರಿಕೆ ವಡ್ಡಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ್ದಾರೆ.
ಹೌದು ಲೋಕಾಯುಕ್ತ ದಾಳಿ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಏಜೆಂಟ್ಗಳ ಮೂಲಕ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಏಜೆಂಟ್ ಗಳನ್ನು ಬಿಟ್ಟು ಸರ್ಕಾರಿ ಅಧಿಕಾರಿಗಳಿಗೆ ಐಪಿಎಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕಾನ್ಸ್ಟೇಬಲ್ ಗಳನ್ನು ಬಿಟ್ಟು ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮತ್ತೊಂದು ಅತಿ ದೊಡ್ಡ ಹಗರಣ ಇದಾಗಿದೆ.
ಇನ್ನು ವಸೂಲಿ ಮಾಡಿದ್ದ ಹಣವನ್ನು ಕೋಟಿ ಕೋಟಿ ಹಣವನ್ನು ಬಿಟ್ ಕಾಯಿನ್ ಹೂಡಿಕೆ ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಕುರಿತಂತೆ ಸಾಕ್ಷಿಗಳು ಸಹಿತ ಲಭ್ಯವಾಗಿವೆ. ಲೋಕಾಯುಕ್ತ ಹಿರಿಯ ಅಧಿಕಾರಿ ಸಾಕ್ಷಿಗಳು ಇವೆ. ನಿಂಗಪ್ಪ ಎನ್ನುವನನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದರು. ಅಬಕಾರಿ ಅಧಿಕಾರಿಗಳ ಜೊತೆಗೆ ವಸೂಲಿ ಮಾಡುತ್ತಿದ್ದ ನಿಂಗಪ್ಪ ಲೋಕಾಯುಕ್ತ ದಾಳಿ ನಡೆಸುತ್ತೇವೆ ಎಂದು ನಿಂಗಪ್ಪ ಹಣ ವಸೂಲಿ ಮಾಡುತ್ತಿದ್ದ.
ಅಲ್ಲದೇ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮಾಹಿತಿ ಲಭ್ಯವಾಗಿದೆ. ಕೋಟ್ಯಾಂತರ ರೂಪಾಯಿಗಳನ್ನು ನಿಂಗಪ್ಪ ವಸೂಲಿ ಮಾಡಿ ಶ್ರೀನಾಥ್ ಜೋಶಿಗೆ ಪಾಲು ಕೊಟ್ಟಿದ್ದ ಎನ್ನಲಾಗಿದೆ. ಕೋಟಿ ಕೋಟಿ ವಸೂಲಿ ಮಾಡಿದ ಅಧಿಕಾರಿಗಳನ್ನು ಇದೀಗ ಎತ್ತಂಗಡಿ ಮಾಡಲಾಗಿದೆ ಶ್ರೀನಾಥ್ ಜೋಶಿ ಲೋಕಾಯುಕ್ತದಿಂದ ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.