Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಫಾರ್ಚೂನ್ ಗ್ಲೋಬಲ್ 500’ ಪಟ್ಟಿಯಲ್ಲಿ ಮುಂದುವರಿದ ರಿಲಯನ್ಸ್ ಇಂಡಸ್ಟ್ರೀಸ್ ಪಾರಮ್ಯ

30/07/2025 5:35 PM

BREAKING: ಐಸಿಎಐ ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ಎನ್.ಮನೋಹರನ್ ನಿಧನ | T N Manoharan No More

30/07/2025 5:21 PM

BREAKING : IDBI ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ‘ಟಿ. ಎನ್ ಮನೋಹರನ್’ ವಿಧಿವಶ |TN Manoharan No More

30/07/2025 5:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಖಾಸಗಿಯಾಗಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ವಿಸ್ತರಣೆ : ರಾಜ್ಯ ಸರ್ಕಾರ ಆದೇಶ
KARNATAKA

BREAKING : ರಾಜ್ಯದಲ್ಲಿ ಖಾಸಗಿಯಾಗಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ವಿಸ್ತರಣೆ : ರಾಜ್ಯ ಸರ್ಕಾರ ಆದೇಶ

By kannadanewsnow5717/06/2025 6:01 AM

ಬೆಂಗಳೂರು : 2025-26ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡೈಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್, 30, 31 ಮತ್ತು 32ರಂತೆ ಹಾಗೂ The Karnataka Educational Institutions(Classification and Registration) Rules 1997 2 ಅಧಿಸೂಚನೆ ಪತ್ರ ಸಂಖ್ಯೆ:ED 709 PGC 2017, ದಿನಾಂಕ:07-03-2018ರ ಅಧಿಸೂಚನೆಯಂತೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಕೋರಿದ ಶೈಕ್ಷಣಿಕ ವರ್ಷದ ಹಿಂದಿನ ಸಾಲಿನ ನವೆಂಬರ್ 30 ಅಥವಾ ಅದಕ್ಕೂ ಮೊದಲು ಇಲಾಖಾ ವೆಬ್ ಸೈಟ್ ನಲ್ಲಿ ಹೊಸ ಶಾಲಾ ನೊಂದಣಿ ಕುರಿತು ಅರ್ಜಿ ಸಲ್ಲಿಸಿ ನಿಯಮಾನುಸಾರ ನೊಂದಣಿ ಪಡೆಯಬೇಕಾಗಿರುತ್ತದೆ. ಅದರಂತೆ ಉಲ್ಲೇಖ-13 ರನ್ವಯ 2025-26ನೇ ಸಾಲಿಗೆ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ಪ್ರೌಢಶಾಲೆ ನೊಂದಣಿ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಇಲಾಖಾ ដ https://schooleducation.karnataka.gov.in/ಸಲ್ಲಿಸಲು ದಿನಾಂಕ:28-02-2025 ರವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು.

ಮುಂದುವರೆದು, 2025-26ನೇ ಸಾಲಿನ ಹೊಸ ಶಾಲಾ ನೊಂದಣಿಗೆ ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಕೆಯಾದ ಮನವಿಗಳು ಹಾಗೂ ಉಲ್ಲೇಖಿತ (14)ರಲ್ಲಿ ಸರ್ಕಾರದಿಂದ ಏಕಕಡತದಲ್ಲಿ ಅನುಮೋದನೆಯಂತೆ 2025-26ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ ಪ್ರೌ ಶಾಲೆ ನೊಂದಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ದಿನಾಂಕ:17-06-2025 ರಿಂದ ದಿನಾಂಕ:30-06-2025ರವರೆಗೆ 15 ದಿನಗಳ ಕಾಲ ಅಂತಿಮವಾಗಿ ಅವಕಾಶ ನೀಡಲಾಗಿದೆ. ಈಗಾಗಲೇ 2025-26ನೇ ಸಾಲಿಗೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಹಾಗೂ ಹೊಸದಾಗಿ ಅರ್ಜಿಗಳನ್ನು ಸಲ್ಲಿಸುವ ಆಡಳಿತ ಮಂಡಳಿಗಳಿಗೂ ಈ ಅವಕಾಶ ಅನ್ವಯವಾಗುತ್ತದೆ.

ಉಚಿತ ಮತ್ತು ಕಡ್ಡಾಯ ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ-2009ರ ಸೆಕ್ಷನ್-19 ಮತ್ತು 25ರಂತೆ ನೀಡಿರುವ ಷೆಡ್ಯೂಲ್ ನಂತೆ ಶಾಲೆಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗಳಿಗೆ ಕನಿಷ್ಟ 200 ಕಾರ್ಯನಿರ್ವಹಣಾ ದಿನಗಳು/ 800 ಗಂಟೆಗಳ ಬೋಧನಾ ಅವಧಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಕನಿಷ್ಟ ಕನಿಷ್ಟ 220 ಕಾರ್ಯನಿರ್ವಹಣಾ ದಿನಗಳು/1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಅಂತಿಮ ಅವಕಾಶ ನೀಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ಪುನ: ವಿಸ್ತರಿಸಲಾಗುವುದಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಈಗಾಗಲೇ 2025-26ನೇ ಶೈಕ್ಷಣಿಕ ಸಾಲು ಪ್ರಾರಂಭವಾಗಿರುವುದರಿಂದ ಹೊಸ ಶಾಲಾ ನೊಂದಣಿಗೆ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಯನ್ನು ವೇಳಾಪಟ್ಟಿಯಲ್ಲಿ ನೀಡಿದಂತೆ ನಿಗದಿತ ಕಾಲಾವಧಿಯನ್ನು ಅರ್ಜಿಗಳನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮ ವಹಿಸುವುದು. ಈ ಹಿನ್ನೆಲೆಯಲ್ಲಿ ಉಪನಿರ್ದೇಶಕರ ಕಚೇರಿಯ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಲಾಗಿನ್ಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಳಂಬಕ್ಕೆ ಅವಕಾಶ ನೀಡದೇ ಆಯಾ ದಿನವೇ ನಿಯಮಾನುಸಾರ ಪರಿಶೀಲಿಸಿ ಮುಂದಿನ ಹಂತಕ್ಕೆ ಸಲ್ಲಿಸುವುದು. ಉಪನಿರ್ದೇಶಕರು ತಮ್ಮ ಲಾಗಿನ್ ಗೆ ಸಲ್ಲಿಕೆಯಾದ ಅರ್ಜಿಗಳನ್ನು ಸಹ ಆಯಾ ದಿನವೇ ಪರಿಶೀಲಿಸಿ ಅಗತ್ಯವಿದ್ದಲ್ಲಿ ರೋಲ್ ಬ್ಯಾಕ್ ಮಾಡಲು, ಅರ್ಜಿಯನ್ನು ಅನುಮೋದನೆ ಅಥವಾ ತಿರಸ್ಕರಿಸಿ ಇತ್ಯರ್ಥಪಡಿಸಿದಲ್ಲಿ ಆಯಾ ದಿನವೇ ಡಿ.ಎಸ್.ಸಿ. ಮೂಲಕ ಅನುಮೋದಿಸಿ ಆದೇಶವನ್ನು ನೀಡಲು ಕ್ರಮವಹಿಸಲು ಸೂಚಿಸಿದೆ. ನಿಯಮಾನುಸಾರ ಪರಿಶೀಲಿಸಿ ಅನುಮೋದಿಸಿ ನೊಂದಣಿ ಪ್ರಮಾಣ ಪತ್ರ ನೀಡುವಾಗ ಉಚಿತ ಮತ್ತು ಕಡ್ಡಾಯ ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ-2009ರ ಸೆಕ್ಷನ್-19 ಮತ್ತು 25ರಂತೆ ನೀಡಿರುವ ಷೆಡ್ಯೂಲ್ ನಂತೆ ಶಾಲೆಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗಳಿಗೆ ಕನಿಷ್ಟ 200 ಕಾರ್ಯನಿರ್ವಹಣಾ ದಿನಗಳು/ 800 ಗಂಟೆಗಳ ಬೋಧನಾ ಅವಧಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಕನಿಷ್ಟ ಕನಿಷ್ಟ 220 ಕಾರ್ಯನಿರ್ವಹಣಾ ದಿನಗಳು/1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸುವಂತೆ ಷರತ್ತು ವಿಧಿಸುವುದು. ಯಾವುದೇ ಕಾರಣಕ್ಕೂ ಅರ್ಜಿಯನ್ನು ಪರಿಶೀಲಿಸಲು ವಿಳಂಬ ಮಾಡಿದಲ್ಲಿ ಅಥವಾ Overdue ಆಗಲು ಅವಕಾಶ ನೀಡಿದಲ್ಲಿ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಇವರನ್ನೇ ಹೊಣೆಗಾರರನ್ನಾಗಿಸಲಾಗುವುದು.

ಈಗಾಗಲೇ 2025-26ನೇ ಸಾಲಿಗೆ ನೊಂದಣಿ ಕೋರಿ ಅರ್ಜಿ ಸಲ್ಲಿಸಲು ನೀಡಿದ ಕಾಲಾವಕಾಶದಲ್ಲಿ ಯಾವುದೇ ಶಾಲಾ ಆಡಳಿತ ಮಂಡಳಿಯ ಅರ್ಜಿಯು ತಿರಸ್ಕೃತಗೊಂಡಿದ್ದಲ್ಲಿ ಅಥವಾ ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಲು ಅವಕಾಶವಾಗಿರದಿದ್ದಲ್ಲಿ ಅಂತಹ ಆಡಳಿತ ಮಂಡಳಿಗಳು ದಿನಾಂಕ:-17-06-2025 ರಿಂದ 2025-26ನೇ ಸಾಲಿಗೆ ಹೊಸಶಾಲಾ ನೊಂದಣಿಗೆ ಅರ್ಜಿ ಆಹ್ವಾನಿಸಿ ಬಿಡುಗಡೆ ಮಾಡುವ ಆನ್ ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಉಳಿದಂತೆ ಉಲ್ಲೇಖ(1) ರಿಂದ (13)ರವರೆಗಿನ ಸುತ್ತೋಲೆಗಳಲ್ಲಿನ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.

BREAKING: Extension of registration for starting private primary and high schools in the state: State government orders
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ‘ದಿ ರಾಮೇಶ್ವರಂ ಕೆಫೆ’ಯಿಂದ ಉತ್ತರ ಭಾರತದ ಶೈಲಿಯ ‘ತೀರ್ಥ’ ಕೆಫೆ ಆರಂಭ

30/07/2025 4:55 PM2 Mins Read

BREAKING: ಆ.1ರಿಂದ ಬೆಸ್ಕಾಂ ‘ಎನಿ ಟೈಮ್ ಪೇಮೆಂಟ್'(ATP) ಪಾವತಿ ಯಂತ್ರದ ಸೇವೆ ಸ್ಥಗಿತ

30/07/2025 4:51 PM1 Min Read

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ ಬಳಿ ಪುರಾವೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಿ: ಬಿವೈ ವಿಜಯೇಂದ್ರ ಸವಾಲು

30/07/2025 4:46 PM3 Mins Read
Recent News

‘ಫಾರ್ಚೂನ್ ಗ್ಲೋಬಲ್ 500’ ಪಟ್ಟಿಯಲ್ಲಿ ಮುಂದುವರಿದ ರಿಲಯನ್ಸ್ ಇಂಡಸ್ಟ್ರೀಸ್ ಪಾರಮ್ಯ

30/07/2025 5:35 PM

BREAKING: ಐಸಿಎಐ ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ಎನ್.ಮನೋಹರನ್ ನಿಧನ | T N Manoharan No More

30/07/2025 5:21 PM

BREAKING : IDBI ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ‘ಟಿ. ಎನ್ ಮನೋಹರನ್’ ವಿಧಿವಶ |TN Manoharan No More

30/07/2025 5:18 PM

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ‘ದಿ ರಾಮೇಶ್ವರಂ ಕೆಫೆ’ಯಿಂದ ಉತ್ತರ ಭಾರತದ ಶೈಲಿಯ ‘ತೀರ್ಥ’ ಕೆಫೆ ಆರಂಭ

30/07/2025 4:55 PM
State News
KARNATAKA

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ‘ದಿ ರಾಮೇಶ್ವರಂ ಕೆಫೆ’ಯಿಂದ ಉತ್ತರ ಭಾರತದ ಶೈಲಿಯ ‘ತೀರ್ಥ’ ಕೆಫೆ ಆರಂಭ

By kannadanewsnow0930/07/2025 4:55 PM KARNATAKA 2 Mins Read

ಬೆಂಗಳೂರು: ದಕ್ಷಿಣ ಭಾರತ ಪಾಕಪದ್ಧತಿಗೆ ಹೆಸರುವಾಸಿಯಾಗಿರುವ ದಿ ರಾಮೇಶ್ವರಂ ಕೆಫೆ ಇದೀಗ ಉತ್ತರ ಭಾರತದ ಶೈಲಿ ಆಹಾರಪದ್ಧತಿ ಪರಿಚಯಿಸುತ್ತಿದ್ದು, ಕನ್ನಿಂಗ್‌ಹ್ಯಾಮ್‌…

BREAKING: ಆ.1ರಿಂದ ಬೆಸ್ಕಾಂ ‘ಎನಿ ಟೈಮ್ ಪೇಮೆಂಟ್'(ATP) ಪಾವತಿ ಯಂತ್ರದ ಸೇವೆ ಸ್ಥಗಿತ

30/07/2025 4:51 PM

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ ಬಳಿ ಪುರಾವೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಿ: ಬಿವೈ ವಿಜಯೇಂದ್ರ ಸವಾಲು

30/07/2025 4:46 PM

BREAKING : ಉತ್ತರ ಕನ್ನಡದಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ನಾಪತ್ತೆ, ಇಬ್ಬರ ರಕ್ಷಣೆ

30/07/2025 4:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.