ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಇಂದು ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದಂತಹ ಎಚ್ ಸಿ ಮಹದೇವಪ್ಪ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಒಂದು ಜಂಬೂ ಸವಾರಿಯು ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಲಿದೆ. ಒಟ್ಟು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 7ನೇ ಬಾರಿಗೆ ಅಭಿಮನ್ಯು ಹೊತ್ತಿದ್ದಾನೆ.ಈ ಒಂದು ಜಂಬೂ ಸವಾರಿಯು ಅರಮನೆಯಿಂದ ಹೊರಟು, ಜಯಚಾಮರಾಜ ವೃತ್ತ, ಕೆ ಆರ್ ವೃತ್ತ, ಸಯಾಜಿ ರಾವ್ ರಸ್ತೆ, ಆಯುರ್ವೇದ ಆಸ್ಪತ್ರೆಯ ವೃತ್ತ, ತಿಲಕ ನಗರ, ಆರ್ಎಂಸಿ ವೃತ್ತ, ಬಂಬೂ ಬಜಾರ್, ಹೈವೇ ರೋಡ್ ಬನ್ನಿಮಂಟಪ ಮೈದಾನ, ಬನ್ನಿಮಂಟಪ ತಲುಪಲಿದೆ.
ಈ ಬಾರಿಯ ಜಂಬೂ ಸವಾರಿಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತಿದ್ದಾನೆ.ಇನ್ನು ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮಿ ಭಾಗವಹಿಸಿದ್ದು, ನಿಶಾನೆ ಆನೆಯಾಗಿ ಧನಂಜಯ ಆನೆ, ಸಾಲಾನೆಗಳಾಗಿ ಗೋಪಿ, ಮಹೇಂದ್ರ, ಸುಗ್ರೀವ, ಏಕಲವ್ಯ ಮತ್ತು ಪ್ರಶಾಂತ ಭಾಗವಹಿಸಿವೆ. ಇನ್ನೂ ರಾಜ ಮನೆತನದ ದಸರೆಯಲ್ಲಿ ಭೀಮ ಮತ್ತು ಕಂಜನ್ ಆನೆಗಳು ಸೇರಿದಂತೆ ಒಟ್ಟು 9 ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿವೆ.