ಬೆಂಗಳೂರು : ವಿಧಾನ ಪರಿಷತ್ ಆಯ್ಕೆ ಮಾಡುವಂತ ಸದಸ್ಯರುಗಳ ವಿಚಾರಕ್ಕೆ ಸಂಬಂಧಪಟ್ಟಂತೆ ದಿನೇಶ್ ಅಮೀನ್ ಮಟ್ಟು ವಿರುದ್ಧ ಇದೀಗ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ವಿಧಾನ ಪರಿಷತ್ತಿಗೆ ನೇಮಕ ಮಾಡಬಾರದು ಎಂದು ದೂರು ಸಲ್ಲಿಸಿದ್ದು ಈಗಾಗಲೇ ಪರಿಷತ್ತಿಗೆ ನಾಮನಿರ್ದೇಶನದ ಕುರಿತಂತೆ ದಲಿತ ಹಿಂದುಳಿದ ಅಲ್ಪಸಂಖ್ಯಾತರ ವೇದಿಕೆಯಿಂದ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ ವೇದಿಕೆ ರಾಜ್ಯ ಅಧ್ಯಕ್ಷ ಜಿಎಂ ಗಾಡ್ಕರ್ ಅವರು ದೂರು ಸಲ್ಲಿಸಿದ್ದಾರೆ.
ತುಮಕೂರಿನಲ್ಲಿ ಇವರು ಅಕ್ರಮವಾಗಿ ಸೈಟ್ ಪಡೆದಿದ್ದಾರೆ. ಸೈಟ್ ಪಡೆಯಬೇಕಾದರೆ15 ವರ್ಷಾ ಅಲ್ಲಿ ನೆಲೆಸಿರಬೇಕು ಎಂದು ನಿಯಮವಿದೆ. ಆದರೆ ಅವರು ತುಮಕೂರಿನಲ್ಲಿ ಇದ್ದದ್ದು ಮೂರ್ನಾಲ್ಕು ವರ್ಷಗಳು ಮಾತ್ರ. ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಇದ್ದು 15 ವರ್ಷಗಳ ಕಾಲ ಇದ್ದೇನೆ ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಸೈಟ್ ಪಡೆದಿದ್ದಾರೆ. ಅಲ್ದೆ ಬೇನಾಮಿ ಕಂಪನಿ ಕುರಿತು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಕ್ರಮವಾಗಿ ದಿನೇಶ್ ಅಮೀನ್ ಮಟ್ಟು ಸೈಟ್ ಪಡೆದುಕೊಂಡಿದ್ದಾರೆ. ಬೇನಾಮಿಯಾಗಿ ಸರ್ಕಾರದಿಂದ ಹಣ ಪಡೆದುಕೊಂಡಿದ್ದಾರೆ ಎಂದು ಎರಡು ಪ್ರಮುಖವಾದ ಆರೋಪಗಳನ್ನು ಜಿಎಂ ಗಾಡ್ಕರ್ ಆರೋಪಿಸಿದ್ದಾರೆ. ಸರ್ಕಾರದಿಂದ ಹಣ ಪಡೆಯುವುದು, ಪಾಲಿಸಿ ಫ್ರೆಂಡ್ ಎಂದು ಕಂಪನಿ ಸ್ಥಾಪನೆ ಮಾಡಿದ್ದು ಅಂತಹ ಒಂದು ಕಂಪನಿಗೆ ಸರ್ಕಾರದ ಜಾಹೀರಾತು ಹಣ ಪಡೆಯುತ್ತಿದ್ದಾರೆ.ಅದಕ್ಕೆ ಯಾವುದೇ ರೀತಿಯಾದಂತಹ ರಿಜಿಸ್ಟ್ರೇಷನ್ ಕೂಡ ಆಗಿಲ್ಲ. ಅಲ್ಲದೆ ದಿನೇಶ್ ಅಮೀನ್ ಮಟ್ಟು ವಿರುದ್ಧ ಬೇರೆ ಬೇರೆ ಸ್ಟೇಷನ್ಗಳಲ್ಲಿ ಬೇರೆ ಬೇರೆ ಪ್ರಕರಣಗಳು ಕುರಿತು ದಾಖಲಾಗಿರುವ ಕೇಸ್ ಕುರಿತು ಉಲ್ಲೆಖಿಸಿದ್ದಾರೆ.