ಬೆಂಗಳೂರು : ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ ಎನ್ನುವ ಗಂಭೀರವಾದ ಆರೋಪ ಕೇಳಿಬಂದಿದೆ.
ಹೌದು ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾಕಷ್ಟು ಜನರಿಗೆ ವಂಚನೆ ಎಸಗಿದ್ದು, ವಸಂತ ಮುರಳಿ ಅವರಿಂದ ಇದೀಗ ಸಾಕಷ್ಟು ಜನರು ಮೋಸ ಹೋಗಿದ್ದಾರೆ. ನನಗೆ ಮುಖ್ಯಮಂತ್ರಿ ಗೊತ್ತು, ಮಿನಿಸ್ಟರ್ ಗೊತ್ತು ಎಂದು ವಸಂತ ಮುರುಳಿ ಅನೇಕರಿಗೆ ವಂಚನೆ ಎಸಗಿದ್ದಾರೆ. ಈ ಕುರಿತು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲ್ಲದೇ ಇಂದು ವಸಂತ ಮುರುಳಿ ಅವರ ಕಾರ್ಯಕ್ರಮಕ್ಕೆ ಮೋಸ ಹೋದವರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪರಸ್ಪರ ಗುಂಪುಗಳು ಕೈ ಕೈ ಮಿಲಾಯಿಸಿಸಿಕೊಂಡು ಗಲಾಟೆ ನಡೆಸಿವೆ. ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ವೇಳೆ ಭಾರೀ ಗಲಾಟೆ ನಡೆದಿದೆ. ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷೆ ಎಂದು ಗುರುತಿಸಲ್ಪಟ್ಟ ವಸಂತ ಮುರಳಿ ವಿರುದ್ಧ ಹಲವರು ಗಂಭೀರ ಆರೋಪ ಹೊರಿಸಿದ್ದಾರೆ.
ವಸಂತ ಮುರಳಿ ಅವರು ‘ಸಿಎಂ, ಮಿನಿಸ್ಟರ್ ನನಗೆ ಪರಿಚಯವಿದ್ದಾರೆ’ ಎಂಬ ಮಾತುಗಳಿಂದ ನಂಬಿಕೆ ಹುಟ್ಟಿಸಿ, ಸರ್ಕಾರದ ಉದ್ಯೋಗ ಕೊಡಿಸುವ ಭರವಸೆಯಿಂದ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಗಂಭೀರವಾಗಿವೆ. ಒಂದು ವರ್ಷದ ಹೆಚ್ಚು ಸಮಯ ಕಳೆದರೂ ಉದ್ಯೋಗ ಅಥವಾ ಹಣ ಮರಳಿ ಸಿಗದ ಕಾರಣ ವಂಚಿತರು ಟೌನ್ಹಾಲ್ ಸಮಾವೇಶಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ.