ಚಾಮರಾಜನಗರ : ಪತಿ ಪತ್ನಿಯ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಆದರೆ ಇಂದು ಇಬ್ಬರ ಮಧ್ಯ ಗಲಾಟೆ ತರಕಕ್ಕೆರಿ ಸಿಟ್ಟಿಗೆದ್ದ ಪತಿ ಪತ್ನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ ಪಾಳ್ಯ ಸಮೀಪದ ಗುಳ್ಳದ ಬಯಲು ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮಾದೇವಿ (28) ಎಂದು ತಿಳಿದುಬಂದಿದೆ. ಕೊಲೆ ಪಾತಕಿಯನ್ನು ಪತಿ ಭದ್ರ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ದಂಪತಿಗಳಿಬ್ಬರ ನಡುವೆ ಕೌಟುಂಬಿಕ ಕಲಹ ತಾರಕಕೇರಿದ್ದು, ಪತಿ ಚಾಕುವಿನಿಂದ ಇರಿದ ಪರಿಣಾಮ ಪತ್ನಿ ಮಾದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ, ಪತಿಯನ್ನು ವಶಕ್ಕೆ ಪಡೆದಿದ್ದಾರೆ.