ಮೈಸೂರು : ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ಕಾವೇರಿ ನೀರಾವರಿ ನಿಗಮವು ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಆದೇಶ ಹೊರಡಿಸಿದೆ.
ನಾಲೆಗಳಿಗೆ ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಣಿದ ಕಾವೇರಿ ನೀರಾವರಿ ನಿಗಮವು 15 ದಿನ ನಾಲೆಗಳಿಗೆ ನೀರು ಹರಿಸಲು ಆದೇಶ ಹೊರಡಿಸಿದೆ.
ಕಬಿನಿ ಜಲಾಶಯದಿಂದ ಜುಲೈ 10 ರಿಂದ25 ರವರೆಗೆ 15 ದಿನ ಕಬಿನಿ ಎಡದಂಡೆ ಹಾಗೂ ಕಬಿನಿ ಬಲದಂಡೆ ನಾಲೆಗಳಿಗೆ ನೀರು ಹರಿಸಲು ಒಪ್ಪಿಗೆ ನೀಡಿದ್ದು, ಜಾನುವಾರುಗಳು ಹಾಗೂ ಕುಡಿಯಲು ನೀರು ಬಳಸುವಂತೆ ಮನವಿ ಮಾಡಲಾಗಿದೆ. ಮುಂದೆ ಬೆಳೆಗಳಿಗೂ ನೀರು ಒದಿಗಿಸುವುದಾಗಿ ಭರವಸೆ ನೀಡಿದೆ.