ಬೆಂಗಳೂರು : ಕೃಷಿ ತೋಟಗಾರಿಕೆಯ 18 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಸಂಪುಟ ಉಪ ಸಮಿತಿ ನಿರ್ಧಾರ ಮಾಡಿದೆ ಎಂದು ಬೆಂಗಳೂರಿನ ವಿಧಾನಸೌಧದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ವರ್ಷ 6.11 ಲಕ್ಷ ರೈತರಿಗೆ 135 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಈ ಬಾರಿ 7 ಲಕ್ಷ ರೈತರಿಂದ ಖರೀದಿ ಮಾಡಲಿದ್ದೇವೆ. ಸೆಪ್ಟೆಂಬರ್ ನಿಂದ ನೊಂದಣಿ ಕಾರ್ಯ ಪ್ರಾರಂಭ ಮಾಡಲಿದ್ದೇವೆ. ಮುಂದಿನ ಮಾರ್ಚ್ ವರೆಗೂ ಉತ್ಪನ್ನಗಳ ಖರೀದಿ ಮಾಡಲಿದ್ದೇವೆ. 4846 ರೂಪಾಯಿಗೆ ಕ್ವಿಂಟಾಲ ರಾಗಿ ಖರೀದಿ ಮಾಡಲಿದ್ದೇವೆ ಈ ಬಾರಿ 596 ರೂಪಾಯಿ ಹೆಚ್ಚಳ ಮಾಡಿದ್ದೇವೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.